ಬೆಂಗಳೂರು, ಮೇ 11 , ನ್ಯೂಸ್ ಎಕ್ಸ್ ಪ್ರೆಸ್ : ಮೊದ್ಲೇ ಬಿಸಿಲಿನ ಝಳ. ಭಾರೀ ಸೆಕೆ. 24 ಗಂಟೆ ಫ್ಯಾನ್, ಎಸಿ ಓಡ್ತಾನೇ ಇರ್ಬೇಕು. ಇದರ ಮಧ್ಯೆ ಸಿಲಿಕಾನ್ ಸಿಟಿ ಜನರಿಗೆ ಬೆಸ್ಕಾಂ ಶಾಕ್ ಕೊಟ್ಟಿದೆ. ಬೆಂಗಳೂರಿನ ಹಲವೆಡೆ ಇವತ್ತು ಮತ್ತು ನಾಳೆ ಪವರ್ ಕಟ್ ಆಗಲಿದೆ ಹೀಗಂತ ಬೆಸ್ಕಾಂ ಹೇಳಿದೆ. 220 ಕೆವಿಎನ್ಆರ್ಎಸ್ ವಿದ್ಯುತ್ ಘಟಕದ ತುರ್ತು ಕಾರ್ಯ ನಿರ್ವಹಣೆ ಹಿನ್ನೆಲೆ ಕರೆಂಟ್ ಸ್ಥಗಿತಗೊಳ್ಳಲಿದೆ ಎಂದು ಬೆಸ್ಕಾಂ ಸ್ಪಷ್ಟಪಡಿಸಿದೆ.
ಎಲ್ಲೆಲ್ಲಿ ಕರೆಂಟ್ ಇರಲ್ಲ?
ವಿಜಯನಗರ, ನಾಗರಬಾವಿ, ಕಾಮಾಕ್ಷಿಪಾಳ್ಯ, ಕೊಡಿಗೇಹಳ್ಳಿ, ಉಲ್ಲಾಳ, ಜ್ಙಾನಭಾರತಿ , ನಾಗರಬಾವಿ, ಚಂದ್ರಾಲೇಔಟ್, ಮೂಡಲಪಾಳ್ಯ, ಹಂಪಿನಗರ, ಮಲ್ಲತಹಳ್ಳಿ, ಅತ್ತಿಗುಪ್ಪೆ, ಕೆಂಗೇರಿ, ಸ್ಯಾಟಲೈಟ್ಟೌನ್, ಚಾಮರಾಜಪೇಟೆ, ಮೈಸೂರು, ರಸ್ತೆಯ ಸುತ್ತಮುತ್ತ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ.