ಕೆ.ಆರ್.ಪುರ, ಜು. 13 : ಬನಶಂಕರಿ ಯಿಂದ ಹೆಬ್ಬಾಳ ಕಡೆಗೆ ಸಂಚರಿಸುತ್ತಿದ್ದ 500A ಮಾರ್ಗ ಸಂಖ್ಯೆಯ ಬಿಎಂಟಿಸಿ ಬಸ್ ದೊಡ್ಡನೆಕ್ಕುಂದಿ ಬಸ್ ನಿಲ್ದಾದಲ್ಲಿ ಪ್ರಯಾಣಿಕರನ್ನು ಹತ್ತಿಸಿಕೊಂಡು ಮುಂದೆ ಸಾಗುತ್ತಿದ್ದಂತೆ ಇಂಜಿನಲ್ಲಿ ಏಕಾಏಕಿ ಬೆಂಕಿ ಹತ್ತಿಕೊಂಡು ಕ್ಷಣಾರ್ಧದಲ್ಲಿ ಬಸ್ ಸುಟ್ಟು ಕರಕಲಾಗಿದೆ.
ಬೆಂಕಿ ಹೊತ್ತಿಕೊಂಡಿದ್ದನ್ನು ಗಮನಿಸಿದ ಚಾಲಕ ಕೂಡಲೇ ಬಸ್ಸು ನಿಲ್ಲಿಸಿ ಪ್ರಯಾಣಿಕರನ್ನು ಕೆಳಗಿಳಿಸಿದ್ದರಿಂದ ಭಾರಿ ಅನಾಹುತ ತಪ್ಪಿದೆ
ಬಸ್ಸು ಬೆಂಕಿಗಾಹುತಿಯಾಗಿರುವ ವಿಷಯ ತಿಳಿದ್ದು, ಸ್ಥಳೀಯ ಖಾಸಗಿ ಸಂಸ್ಥೆಯ ಸಿಬ್ಬಂದಿ
ಅಗ್ನಿ ನಂದಿಸುವ ಸಲಕರಣೆಯ ಮೂಲಕ ಬೆಂಕಿ ಆರಿಸಲು ಹರಸಹಸ ಪಟ್ಟಿದ್ದು, ನಂತರ ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕಾಗಮಿಸಿ ಬೆಂಕಿ ನಂದಿಸಿದ್ದು ಬಸ್ಸು ಅರ್ಧದಷ್ಟು ಸುಟ್ಟು ಭಸ್ಮವಾಗಿದೆ.