ಮಹದೇವಪುರ:ರಕ್ತದಾನ ಮಾಡುವರಿಂದ ಮತ್ತೊಬ್ಬರ ಪ್ರಾಣ ಉಳಿಸುವುದಲ್ಲದೆ ನಮ್ಮ ಆರೋಗ್ಯದಲ್ಲೂ ಸಹ ಬೇಡವಾದಂಹ ಕೊಬ್ಬಿನ ಅಂಶ ತೆಗೆದುಹಾಕಲು ಸಹಾಕಾರಿ ಯಾಗುತ್ತಾದೆ ಎಂದು ಸಂಸದ ಎಸ್.ಮುನಿಸ್ವಾಮಿ ಮನವಿ ಮಾಡಿದರು.
ಕಾಡುಗೂಡಿ ಸರ್ಕಾರಿ ಶಾಲೆಯಲ್ಲಿ ಬಿಜೆಪಿ ಪಕ್ಷದ ವತಿಯಿಂದ ಹಾಗೂ ರೋಟರಿ ಬೆಂಗಳೂರು ವೈಟ್ ಫೀಲ್ಡ್ ಸೆಂಟ್ರಲ್ ಸಹಯೋಗದೊಂದಿಗೆ ಏರ್ಪಡಿಸಿದ್ದ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಒಬ್ಬ ವ್ಯಕ್ತಿ ರಕ್ತದಾನದಿಂದ ಮಾಡುವುದರಿಂದ ಮೂರು ಜನಕ್ಕೆ ಅನುಕೂಲವಾಗಲಿದೆ ಎಂದರು. ಕರೋನ ಸೋಂಕು ಪ್ರಪಂಚದಲ್ಲೆಡೆ ಹರಡುತ್ತಿರುವ ಹಿನ್ನೆಲೆಯಲ್ಲಿ ರಕ್ತದ ಅವಶ್ಯಕತೆ ಹೆಚ್ಚಿದ್ದು ಯುವಕರು ರಕ್ತದಾನ ಮಾಡುವಂತೆ ಮನವಿ ಮಾಡಿದರು.
ಬಿಜೆಪಿಯ ಪಕ್ಷದ ವತಿಯಿಂದ ರಾಜ್ಯದೆಲ್ಲಡೆ ರಕ್ತದಾನ ಶಿಬಿರ ನಡೆಸಲಾಗುತ್ತಿದೆ ಎಂದು ಹೇಳಿದರು. ರಕ್ತಾದಾನದಿಂದ ದೈಹಿಕ ಆರೋಗ್ಯ ಸದೃಢ ವಾಗಲಿದೆ. ಯಾವುದೇ ರೀತಿಯ ಹಾನಿಯಾಗುವುದಿಲ್ಲ. ಪ್ರತಿಯೊಬ್ಬರು ಧೈರ್ಯ ವಾಗಿ ರಕ್ತದಾನ ಮಾಡಲು ಮುಂದಾಗುವಂತೆ ಮನವಿ ಮಾಡಿದರು.