ಬಿಜೆಪಿಯಿಂದ ಶಾಸಕ ಕುಲದೀಪ್ ಉಚ್ಛಾಟನೆ

ಬಿಜೆಪಿಯಿಂದ ಶಾಸಕ ಕುಲದೀಪ್ ಉಚ್ಛಾಟನೆ

ಲಕ್ನೋ, ಆ. 01 : ಉನ್ನಾವ್ ಅತ್ಯಾಚಾರ ಪ್ರಕರಣದ ಆರೋಪಿ ಹಾಗೂ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್ ಅವರನ್ನು ಪಕ್ಷದಿಂದ ಇವತ್ತು ಉಚ್ಛಾಟಿಸಲಾಗಿದೆ. 2017ರ ರೇಪ್ ಪ್ರಕರಣದಲ್ಲಿ ಬಿಜೆಪಿ ಶಾಸಕ ಸೆಂಗಾರ್ ಪ್ರಮುಖ ಆರೋಪಿಯಾಗಿದ್ದಾರೆ. ಕೆಲ ದಿನಗಳ ಹಿಂದೆ ರೇಪ್ ಸಂತ್ರಸ್ತೆ ಕುಟುಂಬದವರಿದ್ದ ಕಾರಿಗೆ ಅಪಘಾತವಾದ ಘಟನೆ ಸಂಬಂಧ ಸೆಂಗಾರ್ ಸೇರಿದಂತೆ 25 ಮಂದಿ ವಿರುದ್ಧ ಕೊಲೆ ಆರೋಪದ ಪ್ರಕರಣ ದಾಖಲಾಗಿದೆ.
ಯೋಗಿ ಆದಿತ್ಯನಾಥ್ ಸಂಪುಟದ ಸಚಿವ ರಣವೇಂದ್ರ ಸಿಂಗ್ ಅವರ ಮಗ ಅರುಣ್ ಸಿಂಗ್ ವಿರುದ್ಧವೂ ಪ್ರಕರಣ ದಾಖಲಾಗಿದೆ. ಕಳೆದ ವರ್ಷದ ಏಪ್ರಿಲ್ ತಿಂಗಳಿನಲ್ಲೇ ಬಂಧಿತರಾಗಿದ್ದ ಕುಲದೀಪ್ ಸಿಂಗ್ ಸೆಂಗಾರ್ ಅವರು ತಮ್ಮ ಬೆಂಬಲಿಗರ ಮೂಲಕ ರೇಪ್ ಸಂತ್ರಸ್ತೆಯ ಕುಟುಂಬದವರನ್ನು ಟಾರ್ಗೆಟ್ ಮಾಡುತ್ತಿದ್ದಾರೆನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos