ಬೆಂಗಳೂರು, ಜು. 9 : ಐ ಎಂ ಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಪಟ್ಟಂತೆ ಶಿವಾಜಿನಗರ ಶಾಸಕ ರೋಷನ್ ಬೇಗ್ ಗೆ ವಿಚಾರಣೆಗೆ ಹಾಜರಾಗುವಂತೆ ಎಸ್ ಐ ಟಿ ಇಂದು ನೋಟಿಸ್ ಜಾರಿ ಮಾಡಿದೆ. ಶಾಸಕ ಸ್ಥಾನಕ್ಕೆ ರಾಜೀನಾಮೆ ಬೆನ್ನೆಲ್ಲೆ ಶಾಸಕ ರೋಷನ್ ಬೇಗ್ ಗೆ ಇದೆ ತಿಂಗಳು 11 ಗುರುವಾರ ವಿಚಾರಣೆಗೆ ಹಾಜಾರಾಗುವಂತೆ ಎಸ್ಐಟಿ ಶಾಕ್ ನೀಡಿದೆ.
ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡುತ್ತಿರು ಹಿನ್ನಲೆ ಬಿಜೆಪಿ ಪಕ್ಷದ ವಿರುದ್ಧ ಕಾಂಗ್ರೆಸ್ ಯುವ ಘಟಕ ಪ್ರತಿಭಟನೆ ಮಾಡಿ, ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ನೇತೃತ್ವದಲ್ಲಿ ರಾಜ್ಯಪಾಲರಿಗೆ ಮನವಿ ಸಲ್ಲಿಸಿ, ಕುದುರೆ ವ್ಯಾಪಾರ ತಡೆಯುವಂತೆ ರಾಜ್ಯಪಾಲರಿಗೆ ಮನವಿ ಸಲ್ಲಿಸಿ ಕಾಂಗ್ರೆಸ್ ಯುವ ಘಟಕ ಪ್ರತಿಭಟನೆ ಮಾಡಿದೆ.
ನಿವಾಸಕ್ಕೆ ಮುಖಂಡರು : ಬಿ ಎಸ್ ವೈ ನಿವಾಸಕ್ಕೆ ಶ್ರೀರಾಮುಲು ಹಾಗೂ ಸಿಪಿ ಯೋಗೆಶ್ವರ್, ವಿ ಸೊಮಣ್ಣ ಕೂಡಾ ಆಗಮಿಸಿದ್ದಾರೆ.