ಬಿಜೆಪಿ ಸಂಸದರಿಗೆ ತಿಥಿ ಕಾರ್ಯಕ್ರಮ

ಬಿಜೆಪಿ ಸಂಸದರಿಗೆ ತಿಥಿ ಕಾರ್ಯಕ್ರಮ

ಬೆಂಗಳೂರು. ಅ. 5 : ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಉತ್ತರ ಕರ್ನಾಟಕ ನೆರೆ ಪರಿಹಾರ ತರುವಲ್ಲಿ ಆಸಕ್ತಿ ವಹಿಸದ ಸಂಸದರ ವಿರುದ್ಧ ಅಪರೂಪದ ತಿಥಿ ಕಾರ್ಯಕ್ರಮ ಮಾಡಿದ್ದಾರೆ. ನೆರೆ ಪರಿಹಾರ ವಿಳಂಬ ಹಿನ್ನಲೆ 25 ಬಿಜೆಪಿ ಸಂಸದರಿಗೆ ಇಂದು ಬೆಂಗಳೂರಿನಲ್ಲಿ ಪಿಂಡ ಪ್ರಧಾನ ಕಾರ್ಯ ಮಾಡಲಾಯಿತು. ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಉತ್ತರ ಕರ್ನಾಟಕ ನೆರೆ ಪರಿಹಾರ ತರುವಲ್ಲಿ ಆಸಕ್ತಿ ವಹಿಸದ ಸಂಸದರ ವಿರುದ್ಧ ವಿಶಿಷ್ಟವಾಗಿ ಪ್ರತಿಭಟನೆ ಮಾಡಿದ ಕನ್ನಡಪರ ಸಂಘಟನೆಗಳು 25 ಜನ ಸಂಸದರ ಫೋಟೋ ಇಟ್ಟು ಹಾರ ಹಾಕಿ ತಿಥಿ ಕಾರ್ಯ ಮಾಡಿದರು.
ತಿಥಿ ಕಾರ್ಯಕ್ರಮ ವನ್ನು ಶಾಸ್ತ್ರೋಕ್ತವಾಗಿ ಮಾಡಿ ಅರ್ಚಕರಿಂದ ಪೂಜೆ ಮಾಡಿಸಿ ಪಿಂಡ ಇಟ್ಟು ತಮ್ಮ ಆಕ್ರೋಶ ಹೊರಹಾಕಿದರು. ನೆರೆ ಪೀಡಿತ ಉತ್ತರ ಕರ್ನಾಟಕದ ಇಬ್ಬರು ತಲೆ ಬೋಳಿಕೊಳ್ಳುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದರು. ರಾಜ್ಯದಲ್ಲಿ 38 ಸಾವಿರ ಕೋಟಿಯಷ್ಟು ನಾಶವಾಗಿದೆ ಆದರೆ ಕೇಂದ್ರ ಸರ್ಕಾರ 1,200 ಕೋಟಿ ಬಿಡುಗಡೆ ಮಾಡಿದೆ. ಕೇಂದ್ರದ ಈ ನೀತಿ ಸರಿಯಲ್ಲ ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos