ಬೆಳಗಾವಿ, ಮೇ.9, ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿ ಮುಖಂಡರು ಸೇಡಿನ ರಾಜಕೀಯ ಮಾಡಲಿ, ನಾವು ಪ್ರೀತಿಯ ರಾಜಕಾರಣ ಮಾಡುತ್ತೇವೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ಸೇಡಿನ ರಾಜಕೀಯ ಮಾಡಲಿ, ನಾವು ಪ್ರೀತಿಯ ರಾಜಕಾರಣ ಮಾಡುತ್ತೇವೆ ನಾವು ಮೈತ್ರಿ ಧರ್ಮಕ್ಕೆ ಬದ್ಧರಿದ್ದೇವೆ , ಕುರ್ಚಿ ಖಾಲಿ ಇದ್ದಾಗ ಬೇರೆ ನೋಡೋಣ ಎಂದರು. ನಮ್ಮ ಶಾಸಕರು ಬರದೆ ಇದ್ದರೂ ಪರವಾಗಿಲ್ಲ, ನಮ್ಮ ಕಾರ್ಯಕರ್ತರು ಇದ್ದಾರೆ ನಾವು ಚುನಾವಣೆ ಮಾಡುತ್ತೆವೆ. ಕುಂದಗೋಳದಲ್ಲಿ ಒಳ್ಳೆಯ ಜನ ಇದ್ದಾರೆ, ನಾವು ಪರಿಶ್ರಮಪಟ್ಟಾಗ ಮಾತ್ರ ಪ್ರತಿಫಲ ಸಿಗಲು ಸಾಧ್ಯ ಎಂದು ಡಿ. ಕೆ ಶಿವಕುಮಾರ್ ಮಾತನಾಡಿದರು. ನಮ್ಮ ಪಕ್ಷದ ಕಾರ್ಯಕರ್ತರಿಗೆ ಎಲ್ಲಾ ಜವಾಬ್ದಾರಿ ನೀಡಲಾಗಿದೆ. ಎಲ್ಲಾ ಸಚಿವರು ಮತ್ತು ಮುಖಂಡರಿಗೆ ಇವತ್ತು ಬರಬೇಕು ಎಂಬುದು ಸೂಚನೆ ಇತ್ತು. ಕೆಲವರು ಬಂದಿಲ್ಲ, ಬಂದವರನ್ನು ಪ್ರಚಾರಕ್ಕೆ ಕಳಿಸಿಲಾಗಿದೆ. ನಮಗೆ ದೊಡ್ಡವರು ಬೇಡ, ಸಣ್ಣ ಸಣ್ಣ ಕಾರ್ಯಕರ್ತರು ಬೇಕು ಎಂದರು. ಇದೇ ವೇಳೆ ಪ್ರತಿಕ್ರಿಯೇ ನೀಡಿದ ಅವರು, ಮೈತ್ರಿ ನಾಯಕರ ಕಿರಿಕುಳದಿಂದ ಶಿವಳ್ಳಿ ಸಾವನ್ನಪ್ಪಿದ್ದಾರೆ ಎನ್ನುವ ಬಿಜೆಪಿ ಶಾಸಕ ಶ್ರೀರಾಮುಲು ಹೇಳಿಕೆಗೆ ತಿರುಗೇಟು ನೀಡಿದ ಅವರು . ಶ್ರೀ ರಾಮುಲು ಅವರು ಪೊಲೀಸ್ ಠಾಣೆಗೆ ಹೋಗಿ ದೂರು ನೀಡಲಿ. ಶಿವಳ್ಳಿಯವರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ಮಾಡದೆ, ಜನರಿಗಾಗಿ ದುಡಿದಿದ್ದಾರೆ. ಇಂತಹ ಮಾತುಗಳನ್ನು ಮಾತನಾಡಿ, ರಾಜಕೀಯ ಗೌರವವನ್ನು ಹಾಳು ಮಾಡಬಾರದು ನಮ್ಮ ಶ್ರೀರಾಮುಲು ಅಣ್ಣಾ ಎಂದು ಟಾಂಗ್ ಕೊಟ್ಟರು.