ಬೆಂಗಳೂರು: ನಮಗೆ ಬಜೆಟ್ ಪ್ರತಿ ಕೊಟ್ಟಿಲ್ಲ ಎಂದು ಆರೋಪಿಸಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ
ಬಿಜೆಪಿಯ 104 ಶಾಸಕರು ಪ್ರೊಟೆಸ್ಟ್ ನಡೆಸಿದರು.
ಇಂದು ಬೆಳಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ರಾಜ್ಯ ಬಜೆಟ್ ಮಂಡಿಸುವ ವೇಳೆ ವಿಧಾನ ಸೌಧದ ಗಾಂಧಿ ಪ್ರತಿಮೆ ಮುಂದೆ ಯಡಿಯೂರಪ್ಪ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಈ ವೇಳೆ ಅಧಿವೇಶನದಲ್ಲಿ ನಾವು ಶಾಂತ ರೀತಿಯಲ್ಲಿ ಭಾಗಿಯಗಬೇಕು ಎಂದು ಕೊಂಡಿದ್ವಿ. ಆದ್ರೆ ಅದು ಸಿಎಂ ಕುಮಾರಸ್ವಾಮಿಯವರಿಗೆ ಬೇಕಾಗಿರಲಿಲ್ಲ. ಇದು ಬಹುಮತವಿಲ್ಲದ ಸರ್ಕಾರ. ಅದಕ್ಕಾಗಿ ಇಂದು ಆಡಿಯೋ ರಿಲೀಸ್ ಮಾಡುವ ನಾಟಕವಾಡಿ ನಮ್ಮನ್ನ ರೋಚ್ಚಿಗೆಬ್ಬಿಸಿದ್ದಾರೆ ಎಂದು ಶಾಸಕರು ಆಕ್ರೋಶ ವ್ಯಕ್ತಪಡಿಸಿದರು.