ಏ,6:ಬಾಗೇಪಲ್ಲಿ ಪಟ್ಟಣದ ಜಿಲ್ಲಾ ಪಂಚಾಯತಿ ಕಛೇರಿ ಮುಂಭಾಗದಲ್ಲಿ ಇರುವ ಬಿಜೆಪಿ ಕಚೇಬಿಜೆಪಿ ಪಕ್ಷದ ಸಂಸ್ಥಾನ ದಿನಾಚರಣೆ
ರಿಯಲ್ಲಿ ಪಕ್ಷದ ಸಂಸ್ಥಾನ ದಿನಾಚರಣೆ ಆಚರಿಸಲಾಯಿತು.
ಬಾಗೇಪಲ್ಲಿ ಮಂಡಲಾಧ್ಯಕ್ಷ ಆರ್.ಪ್ರತಾಪ್ ಭಾರತ ಮಾತೆಗೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ಕೆ ಚಾಲನೆ ನೀಡಿ ಮಾತನಾಡಿ,
ಬಾಗೇಪಲ್ಲಿ ಕೊರೋನಾ ವೈರಸ್ ಭೀತಿಯ ನಡುವಲ್ಲೇ ಆಡಳಿತಾರೂಢ ಬಿಜೆಪಿ ತನ್ನ ೪೦ನೇ ಸಂಸ್ಥಾಪನಾ ದಿನಾಚರಣೆಯನ್ನು ಆಚರಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಬಿಜೆಪಿ ಕಾರ್ಯಕರ್ತರ ನ್ನು ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಕೋವಿಡ್-೧೯ ಸಮರದಲ್ಲಿ ಭಾರತ ಗೆಲ್ಲುವಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಮೋದಿ ಹುರಿದುಂಬಿಸಿದ್ದಾರೆ ಎಂದು ಹೇಳಿದರು.
ಆದ್ದರಿಂದ ಪ್ರತಿಯೊಬ್ಬ ಕಾರ್ಯಕರ್ತರು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮಹತ್ವನ್ನು ಮತ್ತೊಮ್ಮೆ ಸಾರಿ ಹೇಳಿರುವ ಪ್ರಧಾನಿ ಮೋದಿ, ಖುದ್ದು ಸಾಮಾಜಿಕ ಅಂತರವನ್ನು ಪಾಲಿಸಿ ಇತರರಿಗೂ ಪಾಲಿಸುವಂತೆ ಪ್ರೇರಣೆ ನೀಡಿ ಎಂದು ಕಾರ್ಯಕರ್ತರಿಗೆ ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ಮಂಡಲ ಅಧ್ಯಕ್ಷ ಆರ್.ಪ್ರತಾಪ್, ಎಸ್ಸಿ ಮೋರ್ಚಾ ಅಧ್ಯಕ್ಷರು ವೆಂಕಟೇಶ್, ಪ್ರಧಾನ ಕಾರ್ಯದರ್ಶಿಗಳು ಪ್ರಭಾಕರ್ ರೆಡ್ಡಿ, ಗೋಪಾಲ್, ಉಪಾಧ್ಯಕ್ಷರು ಆನಂದ್ ರೆಡ್ಡಿ, ಪದ್ಮನಾಬ್, ಶ್ರೀನಿವಾಸ್, ಲೋಕೇಶ್, ಕೊತ್ತಕೋಟ ನರೇಂದ್ರ ರೆಡ್ಡಿ ಮುಂತಾದವರು ಹಾಜರಿದ್ದರು.