ಬೆಂಗಳೂರು, ಅ. 1: ಇಂದು ಬಿಬಿಎಂ ಮೇಯರ್ ಚುನಾವಣೆ ನಡೆಯುತ್ತಿದೆ. ಈ ಚುನಾವಣೆಯಲ್ಲಿ ತಮಗೆ ಬೇಕಾದವರನ್ನೇ ಮೇಯರ್ ಹುದ್ದೆಗೆ ಏರಿಸಲು ಅನರ್ಹ ಶಾಸಕರು ಶತಃ ಪ್ರಯತ್ನ ಪಟ್ಟರು. ಆದರೆ, ಈ ಚುನಾವಣೆ ಪಕ್ಷಕ್ಕೆ ಸಂಬಂಧಿಸಿದ ವಿಚಾರವಾಗಿದ್ದು, ಇದರಲ್ಲಿ ಅನರ್ಹ ಶಾಸಕರು ತಲೆಹಾಕಬೇಡಿ ಎಂದು ಬಿಜೆಪಿ ನಾಯಕರು ಖಡಕ್ ಎಚ್ಚರಿಕೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಅನರ್ಹ ಶಾಸಕರಾದ ಮುನಿರತ್ನ, ಭೈರತಿ ಬಸವರಾಜ್, ಎಸ್.ಟಿ. ಸೋಮಶೇಖರ್ ಹಾಗೂ ಕೆ.ಜಿ. ಗೋಪಾಲಯ್ಯ ಅವರ ಬೆಂಬಲಿತ 15ಕ್ಕೂ ಹೆಚ್ಚು ಕಾರ್ಪೋರೇಟರ್ಗಳಿದ್ದಾರೆ. ಹೀಗಾಗಿ ತಮಗೆ ಬೇಕಾದವರನ್ನು ಮೇಯರ್ ಹುದ್ದೆಗೆ ಏರಿಸಲು ಇವರು ರಣತಂತ್ರ ರಚಿಸಿದ್ದರು.