ಲಖನೌ ಏ. 19, ನ್ಯೂಸ್ ಎಕ್ಸ್ ಪ್ರೆಸ್: ನಿನ್ನೆ ದೇಶಾದ್ಯಂತ 2ನೇ ಹಂತದ ಲೋಕಸಭೆ ಚುನಾವಣೆ ನಡೆದಿದೆ. ಎಲ್ಲರೂ ಬೆರಳ ತುದಿಯಲ್ಲಿ ತಮ್ಮ ಅಧಿಕಾರವನ್ನು ಚಲಾಯಿಸಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಮಾತ್ರ ತಾನು ಇಷ್ಟ ಪಟ್ಟ ಪಕ್ಷಕ್ಕೆ ವೋಟ್ ಹಾಕಲು ಹೋಗಿ ಬೇರೆ ಪಕ್ಷಕ್ಕೆ ಒತ್ತಿದ್ದಕ್ಕೆ ಪಶ್ಚಾತಾಪ ಪಟ್ಟು ತನ್ನ ಬೆರಳನ್ನೇ ಕೊಯ್ದುಕೊಂಡಿದ್ದಾನೆ.
ಬಿಎಸ್ ಪಿ ಪಕ್ಷಕ್ಕೆ ವೋಟ್ ಹಾಕುವ ಬದಲು ಆಕಸ್ಮಿಕವಾಗಿ ಬಿಜೆಪಿಗೆ ವೋಟ್ ಹಾಕಿದೆ ಎನ್ನುವ ಕಾರಣಕ್ಕೆ ಉತ್ತರ ಪ್ರದೇಶದ ದಲಿತ ವ್ಯಕ್ತಿಯೊಬ್ಬ ತನ್ನ ಬೆರಳನ್ನೇ ಕತ್ತರಿಸಿಕೊಂಡಿದ್ದಾನೆ.