ಬಿಜೆಪಿ ಚಾರ್ಜ್ ಶೀಟ್ ರಿಲೀಸ್: ಸಚಿವ ಗುಂಡೂರಾವ್ ಲೇವಡಿ

ಬಿಜೆಪಿ ಚಾರ್ಜ್ ಶೀಟ್ ರಿಲೀಸ್: ಸಚಿವ ಗುಂಡೂರಾವ್ ಲೇವಡಿ

ಬೆಂಗಳೂರು: ಬಿಜೆಪಿ ಕಾಂಗ್ರೇಸ್ ಸರ್ಕಾರದ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆಗೊಳಿಸಲಿದ್ದೇವೆಂಬ ಹೇಳಿಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಲೇವಡಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣ  ನಲ್ಲಿ ಪೋಸ್ಟ್ ಮಾಡಿರುವ ಅವರು,“ನಮ್ಮ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಚಾರ್ಜ್ ಶೀಟ್ ಬಿಡುಗಡೆ ಮಾಡುತ್ತಾರಂತೆ. ಬಿಜೆಪಿ ಅಧಿಕಾರದಲ್ಲಿನ ಹಗರಣಗಳ ತನಿಕೆ ನಡೆಯುತ್ತಿದೆ. ಈ ತನಿಖೆಯ ನಂತರ ಯಾರು ಕಳ್ಳರು ಎಂದು ಗೊತ್ತಾಗುತ್ತೆ. ಆದರೆ ಬಿಜೆಪಿಯವರು ಹೇಳುತ್ತಿರುವುದು ಹಾಸ್ಯಾಸ್ಪದವಾಗಿದೆ. 40% ಕಮೀಷನ್ ಮತ್ತು ಕೋವಿಡ್ ಹಗರಣದ ತನಿಖೆಯನ್ನು ಇಬ್ಬರು ನಿವೃತ್ತ ನ್ಯಾಯಮೂರ್ತಿಗಳು ನಡೆಸುತ್ತಿದ್ದಾರೆ. ಈ ತನಿಖೆಯ ನಂತರ ಬೀಳಲಿರುವುದು ನಿಜವಾದ ಚಾರ್ಜ್ ಶೀಟ್” ಎಂದು ಹೇಳಿದ್ದಾರೆ.
ಇತ್ತೀಚೆಗೆ ಮೋದಿಯವರು ರಾಜ್ಯಕ್ಕೆ ಆಗಮಿಸಿದಾಗ ಬಿಜೆಪಿ ನಾಯಕರನ್ನು ಕಣ್ಣೆತ್ತಿಯೂ ನೋಡದೇ ಹೋಗಿದ್ದು ರಾಜ್ಯದಲ್ಲಿ ಭಾರತೀಯ ಜನತಾ ಪಕ್ಷದ ನಾಯಕರಲ್ಲಿ ಅಭದ್ರತೆಯ ಭಯ ಕಾಡುತ್ತಿದೆ. ಈಗ ಮೋದಿಯವರನ್ನು ಮೆಚ್ಚಿಸಲು ನಮ್ಮ ಸರ್ಕಾರದ ವಿರುದ್ಧ ಚಾರ್ಜ್ ಶೀಟ್ ಬಿಡುಗಡೆ ಮಾಡುವ ಹೊಸ ಬೀದಿ ನಾಟಕ ಪ್ರಾರಂಭಿಸಿದ್ದಾರೆ. ಆದರೆ ಇದ್ಯಾವುದೂ ನಡೆಯೋದಿಲ್ಲ ಇವರ ನಾಟಕ ಕೇವಲ ಕಾಲ್ಪನಿಕವಾದದ್ದು ಸತ್ಯಾಂಶದಿಂದ ಕೂಡಿದ್ದಲ್ಲ ಇವರ ಪ್ರದರ್ಶನ ನೀರಸ ಪ್ರದರ್ಶನವಾಗಲಿದೆ ಎಂದು ಲೇವಡಿ ಮಾಡಿದ್ದಾರೆ.

ವರದಿ
ಮಂಜುನಾಥ.ಲಕ್ಕಿಮರ(ವಿಜಯನಗರ)

ಫ್ರೆಶ್ ನ್ಯೂಸ್

Latest Posts

Featured Videos