ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಮನವಿ

ಬಿಜೆಪಿ ಅಭ್ಯರ್ಥಿ ಗೆಲ್ಲಿಸಲು ಮನವಿ

ಪಾವಗಡ: ಪದವೀಧರರ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆಗೆ ಬಿಜೆಪಿ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು ದಿನಾಂಕ ಸಹ ನಿಗದಿಯಾಗಿದೆ. ಆದ್ದರಿಂದ ಆಗ್ನೇಯ ಕ್ಷೇತ್ರದ ವ್ಯಾಪ್ತಿಗೆ ಬರುವ ಜಿಲ್ಲೆಗಳಲ್ಲಿ ಚುನಾವಣಾ ಪ್ರಚಾರ ಈಗಲೇ ಕಾವು ಪಡೆದುಕೊಂಡಿದೆ.
ಅದರಂತೆ ಪಾವಗಡ ಪಟ್ಟಣದ ಆಂಧ್ರ ಗಿರಿ ಹೋಟೆಲ್‌ನಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಚಿದಾನಂದ ಎಂ ಗೌಡ ಅವರು ಪತ್ರಿಕಾಗೋಷ್ಠಿಯನ್ನು ನಡೆಸಿದರು.
ವಿಧಾನ ಪರಿಷತ್ ಸದಸ್ಯರಾದ ವೈ ಎ ನಾರಾಯಣಸ್ವಾಮಿ ಅವರು ಮಾತನಾಡಿ ಪದವೀಧರ ಕ್ಷೇತ್ರ ವಿಧಾನ ಪರಿಷತ್ ಚುನಾವಣೆ ನಿಗದಿಯಾಗಿದೆ. ಮುಖ್ಯಮಂತ್ರಿ ಯಡಿಯೂರಪ್ಪನವರು ಬಿಜೆಪಿ ಮುಖಂಡರ ಜೊತೆ ಸಮಾಲೋಚನೆ ನಡೆಸಿ ಶಿರಾ ತಾಲೂಕಿನ ಚಿದಾನಂದ ಎಂ. ಗೌಡ ಅವರನ್ನು ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಗಿದೆ.
ಬಿಜೆಪಿ ತಾಲೂಕು ಅಧ್ಯಕ್ಷ ರವಿಶಂಕರ್ ನಾಯ್ಕ , ಜಿಲ್ಲಾ ಉಪಾಧ್ಯಕ್ಷ ರವಿ. ಡಾಕ್ಟರ್ ವೆಂಕಟರಾಮಯ್ಯ, ಗಿರೀಶ್, ಸಮಾಜಸೇವಕರಾದ ಹಾಗೂ ಮುಖಂಡರಾದ ಕೃಷ್ಣ ನಾಯ್ಕ. ಕರಿಯಣ್ಣ, ಶಿವಕುಮಾರ್ ಸಾಕೆಲ್, ನರಸಿಂಹ ರೆಡ್ಡಿ. ಕೋಟ್ಟೇಶ್ವರ ರೆಡ್ಡಿ. ಅಲ್ಕೂದಿರಾಜು. ನವೀನ್,ರೂಫ್ಲ ನಾಯ್ಕ ಕರ್ನಾಟಕ ರಾಜ್ಯ ಬಿಜೆಪಿ ಅಟಲ್ ಸೇನಾ ರಾಜ್ಯಾಧ್ಯಕ್ಷ ಶ್ರೀ ರಾಮನಾಯ್ಕ. ಮಣಿ ನಾಯ್ಕ. ಹಾಗೂ ಇನ್ನೂ ಮುಂತಾದವರು ಬಿಜೆಪಿಯ ಕಾರ್ಯಕರ್ತರು ಸಭೆಯಲ್ಲಿ ಭಾಗವಹಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos