ಬೀದರ್, ಮಾ. 30, ನ್ಯೂಸ್ ಎಕ್ಸ್ ಪ್ರೆಸ್: ಬಿಜೆಪಿ ಹಾಲಿ ಸಂಸದ ಬೀದರ್ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಭಗವಂತ ಖೂಬಾ ಇಂದು ನಾಮಪತ್ರ ಸಲ್ಲಿಸಿದರು. ಈ ವೇಳೆ ಜಿಲ್ಲಾಧ್ಯಕ್ಷ ಡಾ.ಶೈಲೇಂದ್ರ ಬೆಲ್ದಾಳೆ, ಎಂಎಲ್ಸಿ ರಘುನಾಥ್ ಮಲ್ಕಾಪುರೆ, ಅಮರನಾಥ್ ಪಾಟೀಲ್ ಜತೆಗೆ ಆಗಮಿಸಿದ ಚುನಾವಣಾಧಿಕಾರಿಗೆ ನಾಮಪತ್ರ ಸಲ್ಲಿಸಿದರು.
ಬಳಿಕ ಬಿಜೆಪಿ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ ಎಂಎಲ್ಸಿ ಮಲ್ಕಾಪುರೆ, ಬೀದರ್ ಕ್ಷೇತ್ರಕ್ಕೆ ಕಾಂಗ್ರೆಸ್ನವರಿಗೆ ಅಭ್ಯರ್ಥಿ ಸಿಕ್ಕಿರಲಿಲ್ಲ. ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಈಶ್ವರ ಖಂಡ್ರೆ ಅವರನ್ನ ಮಾಡಿದ್ದಾರೆ.
ಖಂಡ್ರೆ ಒಲ್ಲದ ಮನಸ್ಸಿನಿಂದಲೇ ಲೊಕಸಭಾ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಆದ್ದರಿಂದಲೇ ಈಶ್ವರ ಖಂಡ್ರೆಗೆ ಯುದ್ಧಕ್ಕೆ ಮೊದಲೇ ಸೊಲೀನ ಭೀತಿ ಎದುರಾಗಿದೆ. ಯುಪಿಯಲ್ಲಿ ಕಾಂಗ್ರೆಸ್ಗೆ ಯಾವ ಸ್ಥಿತಿ ಬಂದಿದೆ. ಈ ಬಾರಿ ಈಶ್ವರ ಖಂಡ್ರೆ ಅವರಿಗೆ ಸೋಲು ಕಟ್ಟಿಟ್ಟ ಬುತ್ತಿ ಎಂದು
ಕಾಂಗ್ರೆಸ್ ವಿರುದ್ಧ ಮಲ್ಕಾಪುರೆ ವಾಗ್ದಾಳಿ ನಡೆಸಿದರು.