ಬಿಜೆಪಿ ಮುಖಂಡ ಕೇಬಲ್ ಶ್ರೀನಿವಾಸ್ 47ರ ಹುಟ್ಟುಹಬ್ಬ

ಬಿಜೆಪಿ ಮುಖಂಡ ಕೇಬಲ್ ಶ್ರೀನಿವಾಸ್ 47ರ ಹುಟ್ಟುಹಬ್ಬ

ಬೊಮ್ಮನಹಳ್ಳಿ, ಆ. 30: ಮಾಜಿ ನಗರಪಾಲಿಕೆ ಸದಸ್ಯ ಹಾಗೂ ಬಿಜೆಪಿ ಮುಖಂಡ ಕೇಬಲ್ ಶ್ರೀನಿವಾಸ್ ತಮ್ಮ 47 ನೇ ಹುಟ್ಟುಹಬ್ಬವನ್ನು ಸಾರ್ವಜನಿಕರೊಂದಿಗೆ ಸರಳವಾಗಿ ಆಚರಿಸಿಕೊಂಡರು. ಹೊಸರೋಡ್ ನ ತಮ್ಮ ನಿವಾಸದ ಬಳಿ ಹುಟ್ಟುಹಬ್ಬ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಹಾಗೂ ಬೆಂ. ದಕ್ಷಿಣ ಕ್ಷೇತ್ರದ ಶಾಸಕ ಎಂ. ಕೃಷ್ಣಪ್ಪ ಹುಟ್ಟುಹಬ್ಬದಲ್ಲಿ ಭಾಗವಹಿಸಿ ಶುಭಕೋರಿದರು.

ಈ ವೇಳೆ ಸಿಂಗಸಂದ್ರ ವಾರ್ಡ್ನ ನೂರಾರು ಮಹಿಳೆಯರು ಭಾಗವಹಿಸಿದ್ದು, ತಮ್ಮ ನೆಚ್ಚಿನ ಅಣ್ಣನಿಗೆ ಹೂಗುಚ್ಚ ನೀಡುವ ಮೂಲಕ ಶುಭ ಕೋರಿದರು.

ಈ ಭಾರಿ ಉತ್ತರ ಕರ್ನಾಟಕದಲ್ಲಿ ಪ್ರವಾಹ ಉಂಟಾಗಿ ಜನರು ಸಂಕಷ್ಟದಲ್ಲಿರುವುದರಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದು ಬೇಡವೆಂದು ಶ್ರೀನಿವಾಸ್ ರವರು ತೀರ್ಮಾನಿಸಿದ್ದರು. ಆದರೆ, ಅಭಿಮಾನಿಗಳು ಹಾಗೂ ಸಾರ್ವಜನಿಕರ ಒತ್ತಾಯದ ಮೇರೆಗೆ ಸರಳವಾಗಿ ಆಚರಿಸಿಕೊಂಡಿದ್ದು, ತಮ್ಮ ಹುಟ್ಟುಹಬ್ಬದ ಪ್ರಯುಕ್ತ ನೆರೆ ಸಂತ್ರಸ್ತರಿಗೆ ಅಗತ್ಯ ವಸ್ತುಗಳ 300 ಕಿಟ್ ಗಳನ್ನು ವಿತರಿಸಿದರು.ಈ ಸಂದರ್ಭದಲ್ಲಿ ಕೇಬಲ್ ಶ್ರೀನಿವಾಸ್ ಅವರಿಗೆ ಅಭಿಮಾನಿಗಳಿಂದ 47 ನೇ ಹುಟ್ಟುಹಬ್ಬದ ಅಂಗವಾಗಿ 47 ಕೆ.ಜಿ ತೂಕದ ಕೇಕ್ ತಯಾರಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos