ಅರ್ಥಪೂರ್ಣ ವಾಗಿ ಹುಟ್ಟುಹಬ್ಬ ಆಚರಣೆ

ಅರ್ಥಪೂರ್ಣ ವಾಗಿ ಹುಟ್ಟುಹಬ್ಬ ಆಚರಣೆ

ದೊಡ್ಡಬಳ್ಳಾಪುರ, ಅ. 14: ಸಂಪತ್ತು ಗಳಿಸಿದರಷ್ಟೇ ಸಾಲದು ಅದನ್ನು ಸಮಾಜಕ್ಕೆ ವಿನಿಯೋಗಿಸುವ ಮೂಲಕ ಅಸ್ತಿತ್ವಕ್ಕೆ ಶೋಭೆ ತರಬೇಕಿದೆ. ಪ್ರಜ್ಞಾವಂತ ಸಮಾಜದ ನಿರ್ಮಾಣ ಇಂದಿನ ಅಗತ್ಯವಾಗಿದೆ. ಎಂದು ಕಾಂಗ್ರೆಸ್ ಮುಖಂಡ, ಕೊನಘಟ್ಟ ಗ್ರಾಮಪಂಚಾಯ್ತಿ ಸದಸ್ಯ ಬಸವರಾಜು ಹೇಳಿದರು.

ನಗರದ ಕನ್ನಡ ಜಾಗೃತ ಭವನದಲ್ಲಿ ನಡೆದ ಕೆಪಿಸಿಸಿ ಸದಸ್ಯ ಜಿ.ಲಕ್ಷ್ಮೀಪತಿ ಅವರ 57ನೇ ಜನ್ಮದಿನ ಪ್ರಯುಕ್ತ ಆಯೋಜಿಸಿದ್ದ ಹಿರಿಯ ನಾಗರಿಕರಿಗೆ ಉಣ್ಣೆ ಕಂಬಳಿ ವಿತರಣೆ ಸಮಾರಂಭದಲ್ಲಿ ಮಾತನಾಡಿದರು.

ಜಿ.ಲಕ್ಷ್ಮೀಪತಿ ಅವರು ಉತ್ತಮ ನಾಯಕರಾಗಿದ್ದು, ಪಕ್ಷ, ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿರುವುದು ಶ್ಲಾಘನೆ ಎಂದರು. ಹುಟ್ಟುಹಬ್ಬ ಅಂಗವಾಗಿ ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ಸಿಬ್ಬಂದಿ, ದೇಹದಾಢ್ಯಪಟು ಶ್ರೀನಿವಾಸ್, ಕರಾಟೆ ಪಟು ಮಂಜುನಾಥ್ ಅವರನ್ನು ಅಭಿನಂದಿಸಲಾಯಿತು. ವೃದ್ದರಿಗೆ ಉಣ್ಣೆ ಕಂಬಳಿ ವಿತರಿಸಲಾಯಿತು. ಸರ್ಕಾರಿ ಸಾರ್ವಜನಿಕ ಆಸ್ಪತ್ರೆ ರೋಗಿಗಳಿಗೆ ಹಾಲು ಹಣ್ಣು ವಿತರಣೆ ಮಾಡಲಾಯಿತು. ಲಯನ್ಸ್ ಡಯಾಲಿಸಿಸ್ ಆಸ್ಪತ್ರೆಗೆ ಬೆಡ್ ಶೀಟ್ ವಿತರಣೆ, ಕೊನಘಟ್ಟದಲ್ಲಿ ಸಸಿ ನೆಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಶಾಸಕ ಟಿ.ವೆಂಕಟರಮಣಯ್ಯ, ಕೆಪಿಸಿಸಿ ಸದಸ್ಯ ಆರ್.ಜಿ.ವೆಂಕಟಾಚಲಯ್ಯ ಶುಭ ಹಾರೈಸಿದರು.

ಫ್ರೆಶ್ ನ್ಯೂಸ್

Latest Posts

Featured Videos