ಬೈರತಿ ಬಸವರಾಜ ಗೆಲ್ಲುತ್ತಾರೆ: ಡಿ.ವಿ‌.ಸದಾನಂದ ಗೌಡ

ಬೈರತಿ ಬಸವರಾಜ ಗೆಲ್ಲುತ್ತಾರೆ: ಡಿ.ವಿ‌.ಸದಾನಂದ ಗೌಡ

ಕೆಆರ್ ಪುರ, ಡಿ. 02: ಹದಿನೈದು ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬೈರತಿ ಬಸವರಾಜ ಅಧಿಕ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಕೇಂದ್ರ ಸಚಿವ ಡಿ.ವಿ‌.ಸದಾನಂದ ಗೌಡ ಹೇಳಿದರು.

ಹೊರಮಾವು ವಾರ್ಡನ ಕ್ಯಾಲಸನಹಳ್ಳಿ, ನಾಗೇನಹಳ್ಳಿ, ಕೆಂಪೇಗೌಡ ಬಡಾವಣೆ, ಕೆ.ನಾರಾಯಣಪುರದಲ್ಲಿ ಬೈರತಿ ಬಸವರಾಜ ಪರ ಪ್ರಚಾರ ನಡೆಸಿ ಮಾತನಾಡಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರವಿರುವುದರಿಂದ ಹೆಚ್ಚಿನ ಅನುದಾನ ತಂದು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸಲಾಗುವುದೆಂದರು. ಮೈತ್ರಿ ಸರ್ಕಾರದಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ಅನುದಾನ ಸಿಗದೇ ಇದ್ದದ್ದರಿಂದ ಬೈರತಿ ಬಸವರಾಜು ಬಿಜೆಪಿ ಪಕ್ಷ ಸೇರ್ಪಡೆಗೊಂಡರು ಎಂದು ಹೇಳಿದರು.

ಕಳೆದ ಲೋಕಸಭಾ ಚುನಾವಣೆಯಲ್ಲಿ ಇಪ್ಪತ್ತೆಂಟು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲವು ಸಾಧಿಸಿದೆ. ರಾಜ್ಯದಲ್ಲಿ ಬಿಜೆಪಿ ಪರವಾದ ಅಲೆಯಿದೆ ಎಂದರು.

ನಂತರ ಮಾತನಾಡಿದ ಅಭ್ಯರ್ಥಿ ಬೈರತಿ ಬಸವರಾಜ, ಕ್ಷೇತ್ರದ ಅಭಿವೃದ್ಧಿಗೆ ಬಿಜೆಪಿ ಪಕ್ಷವನ್ನು ಬೆಂಬಲಿಸುವಂತೆ ಮತದಾರರಲ್ಲಿ ಮನವಿ ಮಾಡಿದರು.

ಈ ಸಂಧರ್ಭದಲ್ಲಿ ಮುಖಂಡರಾದ ಎ ಶ್ರೀನಿವಾಸ್, ದಿಬ್ಬೂರು ಕೃಷ್ಣ ಮೂರ್ತಿ, ರಘುನಾಥ ರೂಪ್ ಕೇಬಲ್‌, ಆನಂದ್ ಕುಮಾರ್, ಚಂದ್ರೆಗೌಡ, ಬೈರೆಗೌಡ, ಆರ್.ದ್ಯಾವಣ್ಣ ಇದ್ದರು.

ಫ್ರೆಶ್ ನ್ಯೂಸ್

Latest Posts

Featured Videos