ಭೀಕರ ಬಸ್ ಅಪಘಾತ 21 ಮಂದಿ ಸಾವು

ಭೀಕರ ಬಸ್ ಅಪಘಾತ 21 ಮಂದಿ ಸಾವು

ನವದೆಹಲಿ, ಅ. 1 : ಭೀಕರ ಬಸ್ ಅಪಘಾತ ಸಂಭವಿಸಿ 21 ಮಂದಿ ಉತ್ತರ ಗುಜರಾತ್ನ ಬನಸ್ಕಾಂತ ಜಿಲ್ಲೆಯಲ್ಲಿ ಸಾವನ್ನಪ್ಪಿದ್ದಾರೆ. ಈ ದುರ್ಘಟನೆಯಲ್ಲಿ 50ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಿನ್ನೆ ಸಂಜೆ ನಡೆದಿದೆ. ಗುಡ್ಡಗಾಡು ಪ್ರದೇಶವಾಗಿರುವ ತ್ರಿಶುಲ್ಯಾ ಘಾಟ್ ಬಳಿಯಿರುವ ಅಂಬಾಜಿ-ದಂತಾ ರಸ್ತೆ ನಡುವೆ ಬರುವ ಅಂಬಾಜಿ ಟೌನ್ ಬಳಿ ಅಪಘಾತ ಸಂಭವಿಸಿದೆ. ಬಸ್ನಲ್ಲಿ ಒಟ್ಟು 70 ಮಂದಿ ಪ್ರಯಾಣಿಕರಿದ್ದರು ಎಂದು ಬನಸ್ಕಾಂತ ಜಿಲ್ಲಾಯ ಎಸ್ಪಿ ಅಜಿತ್ ರಜಿಯಾನ್ ಹೇಳಿದ್ದಾರೆ.
ಘಟನೆಯಲ್ಲಿ 21 ಮಂದಿ ಸಾವನ್ನಪ್ಪಿದ್ದು, 53 ಮಂದಿ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಗಾಯಗೊಂಡಿರುವ 53 ಮಂದಿಯ ಪೈಕಿ 35 ಮಂದಿಯ ಸ್ಥಿತಿ ಗಂಭೀರವಾಗಿದೆ. ಗಾಯಾಳುಗಳನ್ನು ದಂತಾ ಟೌನ್ ಆಸ್ಪತ್ರೆ ಹಾಗೂ ಪಲಂಪುರ್ ನಾಗರೀಕ ಆಸ್ಪತ್ರೆಗಳಲ್ಲಿ ದಾಖಲು ಮಾಡಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos