ವಿಧಾನಸೌಧದಲ್ಲಿ ನಡೆಯಿತು ಬಿಕರ ಘಟನೆ

ವಿಧಾನಸೌಧದಲ್ಲಿ ನಡೆಯಿತು ಬಿಕರ ಘಟನೆ

ಬೆಂಗಳೂರು, ಜೂ. 24: ಇಂದು ವಿಧಾನಸೌಧದಲ್ಲಿ ಬಿಕರ ಘಟನೆ ಒಂದು ನಡೆದಿದೆ ಹೌದು, ವಿಧಾನಸೌಧದಲ್ಲೇ ವ್ಯಕ್ತಿಯೊಬ್ಬರು ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ವಿಧಾನಸೌಧದ 3ನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 332ರಲ್ಲಿ ಆರ್.ರೇವಣ್ಣ ಕುಮಾರ್ ಎನ್ನುವವರು ಕತ್ತು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದ್ದು, ಸದ್ಯ ರೇವಣ್ಣನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಆತ್ಮಹತ್ಯೆಗೆ ಯತ್ನಿಸಿದ ಆರ್.ರೇವಣ್ಣ ಕುಮಾರ್ ಚಿಕ್ಕಬಳ್ಳಾಪುರದ ಆಯನೂರು ಮೂಲದವರು ಅಂತ ತಿಳಿದು ಬಂದಿದ್ದು, ಇವರು ಎಂ.ಎಸ್ ಬಿಲ್ದಿಂಗ್ನಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿದ್ದರು ಅಂತ ತಿಳಿದು ಬಂದಿದ್ದು, ಆತ್ಮಹತ್ಯೆ ಯತ್ನಿಸಿರುವುದಕ್ಕೆ ಇನ್ನೂ ಕಾರಣ ತಿಳಿದು ಬಂದಿಲ್ಲ ಹೆಚ್ಚಿನ ಮಾಹಿತಿಯನ್ನು ನಿರೀಕ್ಷೆ ಮಾಡಲಾಗುತ್ತಿದೆ.

ಫ್ರೆಶ್ ನ್ಯೂಸ್

Latest Posts

Featured Videos