ನರೇಗಲ್ಲ, ಫೆ. 01: ಪ್ರಕೃತಿಯ ನಿಯಮದಂತೆ ಸಾಮಾನ್ಯವಾಗಿ ಗಂಡು ಹೆಣ್ಣಿಗೆ ಮದುವೆ ಮಾಡುತ್ತಾರೆ. ಕೆಲವರಿಗೆ ಬೇಗ ಮದುವೆ ಆದರೆ ಇನ್ನು ಕೆಲವರಿಗೆ ಲೇಟಾಗಿ ಆಗುತ್ತದೆ. ಹೌದು, ಮದುವೆಗೆ ಎಷ್ಟೋ ಹೆಣ್ಣುಗಳ ನೋಡಿದರೂ ಅವನಿಗೆ ಹೆಣ್ಣು ಸಿಗಲ್ಲಿಲ್ಲ. ಹೆಣ್ಣು ಸಿಗದ ಕಾರಣಕ್ಕೆ ಗ್ರಾಮಪಂಚಾಯಿತಿಗೆ ನನ್ನ ಮದುವೆ ಮಾಡಿಸಿ ಎಂದು ಅರ್ಜಿ ಸಲ್ಲಿಸಿರುವ ಘಟನೆಯೊಂದು ನಡೆದಿದೆ.
ನರೇಗಲ್ಲದ ಗ್ರಾಮದೇವತೆ ಪೂಜಾರಿ ದ್ಯಾಮಣ್ಣ ಕಮ್ಮಾರ ಮನವಿ ನೀಡಿದವ. 37 ವರ್ಷದಿಂದ ಸ್ವಜಾತಿಯ ಕನ್ಯೆಗಾಗಿ ಹುಡುಕಾಟ ನಡೆಸಿದ್ದಾರೆ. ಆದರೆ, ಇದುವರೆಗೂ ಕನ್ಯೆ ಸಿಕ್ಕಿಲ್ಲ. ಬೇಸರಗೊಂಡ ದ್ಯಾಮಣ್ಣ, ‘ನಾನು ಹಲವು ವರ್ಷಗಳಿಂದ ಒಂಟಿಯಾಗಿ ಬದುಕುತ್ತಿದ್ದೇನೆ. ದಯವಿಟ್ಟು ಬೇಗ ಕನ್ಯೆ ಹುಡುಕಿ ಮದುವೆ ಮಾಡಿಕೊಡಿ’ ಎಂದು ಗ್ರಾಪಂಗೆ ಕೋರಿದ್ದಾರೆ.
ಪ್ರತಿಕ್ರಿಯಿಸಿದ ಪಿಡಿಒ ಉಮೇಶ ಹುಕ್ಕೇರಿ, ನಮ್ಮ ವ್ಯವಸ್ಥೆಯಲ್ಲಿ ಇದಕ್ಕೆ ಅವಕಾಶ ಇದೆಯೇ ಎಂಬ ಬಗ್ಗೆ ಪರಿಶೀಲಿಸಿ, ಮದುವೆ ಮಾಡಿಸುವ ಪ್ರಯತ್ನ ನಡೆಸುವುದಾಗಿ ತಿಳಿಸಿದ್ದಾರೆ.