ಭಾರತ ಕ್ರಿಡಾ ಪ್ರೇಮಿ ರಾಷ್ಟ್ರ : ಸಚಿನ್ ತೆಂಡೂಲ್ಕರ್

ಭಾರತ ಕ್ರಿಡಾ ಪ್ರೇಮಿ ರಾಷ್ಟ್ರ : ಸಚಿನ್ ತೆಂಡೂಲ್ಕರ್

ಮುಂಬೈ, ಆ. 25 : ಭಾರತ ದೇಶ ಕ್ರೀಡಾ ನೆಚ್ಚಿನ ರಾಷ್ಟ್ರವಾಗಿ ಮಾರ್ಪಾಡಾಗುತ್ತಿದೆ ಎಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮುಂಬೈನಲ್ಲಿ ಇಂದು ನಡೆದ ಮ್ಯಾರಥಾನ್ಗೆ ಹಸಿರು ನಿಶಾನೆ ತೋರಿದ ಬಳಿಕ ಮಾತನಾಡಿ, ಪ್ರತಿಯೊಬ್ಬರು ಆರೋಗ್ಯಕರ ಜೀವನ ಶೈಲಿಯೊಂದಿಗೆ ಬದುಕಬೇಕೆಂಬುದನ್ನು ಬಲವಾಗಿ ನಂಬುತ್ತೇನೆ. ಜನರು ಕೂಡ ಆಹಾರ ಸೇವಿಸುವ ವಿಚಾರದಲ್ಲಿ ತುಂಬಾ ಕಾಳಜಿ ವಹಿಸುವುದು ಮುಖ್ಯ. ಪಾಲನೇ ಮಾಡಿದ್ದೆ ಆದಲ್ಲಿ ನಿಧಾನಗತಿಯಲ್ಲಿ ಕ್ರೀಡಾ ನೆಚ್ಚಿನ ದೇಶವಾಗಿ ಭಾರತ ಬದಲಾಗಲಿದೆ ಎಂದು ಸಚಿನ್ ಸಲಹೆ ನೀಡಿದರು.
” ಈ ಮ್ಯಾರಥಾನ್ನಲ್ಲಿ 20, 000 ಓಟಗಾರರು ಭಾಗವಹಿಸಿದ್ದಾರೆ. ಪ್ರತಿಯೊಬ್ಬರ ಜೀವನದಲ್ಲೂ ಫಿಟ್ನೆಸ್ ಪ್ರಧಾನ ಪಾತ್ರ ವಹಿಸುತ್ತದೆ. ಬೆಳಗ್ಗೆ ಮಳೆಯಾಗಿದ್ದರೂ ಓಟಗಾರರು ಇದನ್ನೂ ಲೆಕ್ಕಿಸದೆ ಓಟ ಮುಂದುವರಿಸಿದ್ದರು. ಇದನ್ನು ಗಮನಿಸಿದಾಗ ಮ್ಯಾರಥಾನ್ ಅನ್ನು ಜನರು ತುಂಬು ಹೃದಯದಿಂದ ಸ್ವಾಗತಿಸಿದ್ದಾರೆ ಎಂದು ಗೊತ್ತಾಗಲಿದೆ” ಎಂದು ಹೇಳಿದರು.

ಫ್ರೆಶ್ ನ್ಯೂಸ್

Latest Posts

Featured Videos