ಕೊಪ್ಪಳ, ಮಾ. 29, ನ್ಯೂಸ್ ಎಕ್ಸ್ ಪ್ರೆಸ್: ಭಾರತದಲ್ಲಿ ಮುಸ್ಲಿಂ ಸಮುದಾಯಕ್ಕೆ ಅನ್ಯಾಯವಾಗುತ್ತಿದೆ ಎಂದು ಕೊಪ್ಪಳದಲ್ಲಿ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ. ಕಾಂಗ್ರೆಸ್ ಸೇರಿದಂತೆ, ಬಿಜೆಪಿ, ಜೆಡಿಎಸ್, ಎಲ್ಲ ಪಕ್ಷಗಳಲ್ಲಿ ನಮಗೆ ಅನ್ಯಾಯವಾಗುತ್ತಿದೆ. ರಾಜಕೀಯ ಪಕ್ಷಗಳು ಸೇರಿಕೊಂಡು ಮುಸ್ಲಿಂರಿಗೆ ಅನ್ಯಾಯ ಮಾಡುತ್ತಿವೆ.
ಟಿಕೆಟ್ ಕೊಟ್ಟರೆ ಗೆಲ್ಲೋದಕ್ಕೆ ಬಿಡೋದಿಲ್ಲ ಏನಾದರು ತಗಾದೆ ತಗೆದು ಸೋಲಿಸುತ್ತಾರೆ. ಟಿಕೆಟ್ ಗೆ ಪೈಪೋಟಿ ಮಾಡಿದರು ಟಿಕೆಟ್ ಸಿಗೋದಿಲ್ಲ
ಕಾರಣಾಂತರಗಳಿಂದ ಟಿಕೆಟ್ ಕೊಡುವುದಿಲ್ಲ, ಹೀಗಾಗಿ 3 ಪಕ್ಷದಲ್ಲಿ ಅನ್ಯಾಯವಾಗಿದೆ ಎಂದ ಇಕ್ಬಾಲ್ ಅನ್ಸಾರಿ ಹೇಳಿದ್ದಾರೆ.
ಅನ್ಸಾರಿಗೆ ಟಿಕೆಟ್ ಘೋಷಣೆ ಮಾಡಿದರು ಕೂಡ, ಟಿಕೆಟ್ ಕೊಡದೆ ಹಿಟ್ನಾಳ್ ಕುಟುಂಬಕ್ಕೆ ಟಿಕೆಟ್ ಕೊಡಲಾಗಿದೆ.
ಈ ಹಿನ್ನಲೆ ಕುರಿತು ಭಾರತದಲ್ಲಿ ಮುಸ್ಲಿಂ ಸಮುದಾಯದವರಿಗೆ ಅನ್ಯಾಯವಾಗಿದೆ ಎಂದು ಇಕ್ಬಾಲ್ ಅನ್ಸಾರಿ ಹೇಳಿಕೆ ನೀಡಿದ್ದಾರೆ.