ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಗೆ ವೀರ ಚಕ್ರ

ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಗೆ ವೀರ ಚಕ್ರ

ನವದೆಹಲಿ, ಆ.8: ಭಾರತೀಯ ಗಡಿರೇಖೆಯಲ್ಲಿ ಫೆ.27 ರಂದು ನಡೆದ ಭಾರತೀಯ ವಾಯುಗಡಿ ಉಲ್ಲಂಘಿಸಿ ದಾಳಿ ನಡೆಸಲು ಯತ್ನಿಸಿದ್ದ ಪಾಕಿಸ್ತಾನದ ಎಫ್ 26 ಯುದ್ಧ ವಿಮಾನವನ್ನು ಹೊಡೆದುರುಳಿಸಿದ್ದ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ರ್ತಸಮಾನ್ ಗೆ ಸರ್ಕಾರ ವೀರ ಚಕ್ರ ನೀಡಿ ಗೌರವಿಸುವ ಸಾಧ್ಯತೆಗಳಿವೆ.
ಸುದ್ದಿ ಸಂಸ್ಥೆ IANS ಅನ್ವಯ ವಿಂಗ್ ಕಮಾಂಡರ್ ಅಭಿನಂದನ್ ಜತೆಗೆಬಾಲಾಕೋಟ್ನಲ್ಲಿನ ಉಗ್ರರ ನೆಲೆಗಳ ಮೇಲೆ ಸದ್ದಿಲ್ಲದೆ ಏರ್ ಸ್ಟ್ರೈಕ್ ನಡೆಸಿ ಸುರಕ್ಷಿತವಾಗಿ ಮರಳಿದ್ದ ಮಿರಾಜ್ 2000 ಯುದ್ಧ ವಿಮಾನಗಳ 5 ಪೈಲಟ್ಗಳಿಗೆ ವಾಯು ಸೇನಾ ಪದಕ ಗೌರವ ಲಭಿಸುವ ಸಾಧ್ಯತೆಗಳಿವೆ.
ಐದು ಮಿರಾಜ್ -2000 ಯುದ್ಧ ವಿಮಾನಗಳು ಪಾಕಿಸ್ತಾನಕ್ಕೆ ನುಗ್ಗಿ ಅಲ್ಲಿನ ಉಗ್ರ ನೆಲೆಗಳನ್ನು ಧ್ವಂಸಗೊಳಿಸಿದ ನಂತರ ಪಾಕಿಸ್ತಾನದ ಎಫ್-16 ಜೆಟ್ ವಿಮಾನ ಹೊಡೆದುರುಳಿದ ಶೌರ್ಯಕ್ಕಾಗಿ ವಾಯು ಪಡೆಯ ಈ ಪದಕವನ್ನು ನೀಡಲಾಗುತ್ತಿದೆ.
ಫೆ.14ರಂದು ನಡೆದ ಪುಲ್ವಾಮಾ ದಾಳಿಯ ಪ್ರತೀಕಾರವಾಗಿ ಭಾರತೀಯ ಸೇನಾ ಪಡೆ ಪಾಕಿಸ್ತಾನದ ಬಾಲ್ ಕೋಟ್ ನಲ್ಲಿ ಸರ್ಜಿಕಲ್ ದಾಳಿ ನಡೆಸಿ ಉಗ್ರರ ನೆಲೆಗಳನ್ನು ಧ್ವಂಸಗೊಳಿಸಿತ್ತು. ಬಳಿಕ ಭಾರತೀಯ ವಾಯು ಗಡಿ ದಾಟಿ ಬಂದ ಪಾಕಿಸ್ತಾನದ ಎಫ್-16 ಯುದ್ಧ ವಿಮಾನ ಜೊತೆಗೆ ಕಾಳಗ ನಡೆಸಿದ್ದ ಅಭಿನಂದನ್ ಅದನ್ನು ಹೊಡೆದುರುಳಿಸುವಲ್ಲಿ ಯಶಸ್ವಿಯಾಗಿದ್ದರು.
ಅದಾದ ನಂತರ ಪ್ಯಾರಾಚೂಟ್ ಮೂಲಕ ಪಾಕಿಸ್ತಾನದ ನೆಲಕ್ಕೆ ಧುಮುಕ್ಕಿದ್ದ ಅವರನ್ನು ಅಲ್ಲಿನ ಸೇನೆ ಬಂಧಿಸಿತ್ತು. 60 ಗಂಟೆಗಳ ನಂತರ ಮಾ.1ರಂದು ಭಾರತಕ್ಕೆ ವಾಪಸ್ ಕಳುಹಿಸಿತ್ತು.ವೀರಚಕ್ರ ಯೋಧರಿಗೆ ನೀಡಲಾಗುವ ಮೂರನೆಯ ಅತ್ಯುನ್ನತ ಪ್ರಶಸ್ತಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos