ಬೆಂಗಳೂರಲ್ಲಿ ಮೊಳಗಿದ ಗುಂಡಿನ ಸದ್ದು

ಬೆಂಗಳೂರಲ್ಲಿ ಮೊಳಗಿದ ಗುಂಡಿನ ಸದ್ದು

ಬೆಂಗಳೂರು, ಏ. 29, ನ್ಯೂಸ್ ಎಕ್ಸ್ ಪ್ರೆಸ್: ಇಂದು ನಗರದಲಿ ಆರೋಪಿಯೊಬ್ಬನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಮನ್ಸೂರ್ ಖಾನ್ ಗುಂಡಿನ ದಾಳಿಗೆ ಒಳಗಾದ ಆರೋಪಿಯಾಗಿದ್ದು, ಆತನನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ರಾಬರಿ, ಕಳವು, ಕೊಲೆ ಯತ್ನ ಸೇರಿದಂತೆ ಹಲವು ಪ್ರಕರಣಗಳಲ್ಲಿ ಬೇಕಾಗಿದ್ದ ಮನ್ಸೂರ್ ಖಾನ್ ಮೆಜೆಸ್ಟಿಕ್ ಪ್ರದೇಶದ ಸಂಗೊಳ್ಳಿ ರಾಯಣ್ಣ ಸರ್ಕಲ್ ಬಳಿ ಇರುವ ಮಾಹಿತಿ ಪಡೆದ ಉಪ್ಪಾರಪೇಟೆ ಠಾಣೆ ಪೊಲೀಸರು ಬಂಧಿಸಲು ತೆರಳಿದ್ದಾರೆ.

ಈ ವೇಳೆ ಮನ್ಸೂರ್ ಖಾನ್ ತನ್ನ ಬಳಿ ಇದ್ದ ಡ್ರ್ಯಾಗರ್ ನಿಂದ ಪೊಲೀಸ್ ಜಯಚಂದ್ರ ಅವರ ಮೇಲೆ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆತನ ಮೇಲೆ ಉಪ್ಪಾರಪೇಟೆ ಪಿಎಸ್ಐ ರಾಜೇಂದ್ರ ಫೈರಿಂಗ್ ಮಾಡಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos