ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ರೋಡ್ ಶೋ

ಬೆಂಗಳೂರು ಸೆಂಟ್ರಲ್ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ರೋಡ್ ಶೋ

ಬೆಂಗಳೂರು, ಏ. 5, ನ್ಯೂಸ್ ಎಕ್ಸ್ ಪ್ರೆಸ್: ಇಲ್ಲಿನ ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಿಜ್ವಾನ್ ಅರ್ಷದ್ ಇಂದು ರೋಡ್ ಶೋ ನಡೆಸುವ ಮೂಲಕ ಮತಯಾಚಿಸಿದರು. ಈ ವೇಳೆ ಅವರಿಗೆ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್​​ ಸಾಥ್​ ನೀಡಿದರು. ಮಲ್ಲೇಶ್ವರದ ದತ್ತಾತ್ರೇಯ ದೇವಸ್ಥಾನ, ಮುನೇಶ್ವರ ಬ್ಲಾಕ್, ನಾಗಪ್ಪ ರಸ್ತೆ, ಬಸಪ್ಪ ಗಾರ್ಡನ್, ಆಂಜನೇಯ ಬ್ಲಾಕ್, ಮಲ್ಲೇಶ್ವರ 1ನೆ ಬ್ಲಾಕ್, ಎನ್​​ಕೆಬಿ ರೋಡ್, ಸಂಪಿಗೆ ಚಿತ್ರಮಂದಿರ, ಸ್ವತಂತ್ರ ಪಾಳ್ಯ, ಹನುಮಂತಪುರ ಒಂದನೇ ಹಂತ, ಸನ್ರೈಸ್ ಸರ್ಕಲ್, ಈಶ್ವರಿ ಬಾರ್ ರೋಡ್, ಸಾಯಿಬಾಬಾ ಕಲ್ಯಾಣ ಮಂಟಪ, ಆರ್.ಸಿ ಪುರಂ, ಗಣೇಶ ಟೆಂಪಲ್, ಓಕಲಿಪುರಂವರೆಗೂ ರಸ್ತೆ ಮಾರ್ಗವಾಗಿ ತೆರೆದ ವಾಹನದಲ್ಲಿ ರೋಡ್ ಶೋ ನಡೆಸಿದರು.

ಈ ಸಂಧರ್ಭದಲ್ಲಿ ಮಾತನಾಡಿದ ದಿನೇಶ್ ಗುಂಡೂರಾವ್, ಕಳೆದ ಐದು ವರ್ಷಗಳಲ್ಲಿ ಈ ಭಾಗದ ಜನರ ಯಾವುದೇ ಬೇಡಿಕೆಗಳು ಈಡೇರಿಲ್ಲ. ಹೀಗಾಗಿ, ಯುವಜನರ ಹಾಗೂ ತಮ್ಮೆಲ್ಲರ ಪರವಾಗಿ ರಿಜ್ವಾನ್ ಅವರು ಧ್ವನಿ ಎತ್ತಲಿದ್ದಾರೆ. ಹೀಗಾಗಿ ಚುನಾಯಿಸಿ ಲೋಕಸಭೆಗೆ ಕಳುಹಿಸುವಂತೆ ಮನವಿ ಮಾಡಿದರು.

ಫ್ರೆಶ್ ನ್ಯೂಸ್

Latest Posts

Featured Videos