ನವದೆಹಲಿ, ಆ. 31: ಸರ್ಕಾರಿ ಕಚೇರಿಗಳಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಸಿಬಿಐ ಅಧಿಕಾರಿಗಳು ಬೆಂಗಳೂರು ಸೇರಿ ಶುಕ್ರವಾರ ದೇಶಾದ್ಯಂತ 150 ಕಡೆಗಳಲ್ಲಿ ಏಕ ಕಾಲಕ್ಕೆ ದಾಳಿ ನಡೆಸಿದೆ.
ಬೆಂಗಳೂರು, ದೆಹಲಿ, ಜೈಪುರ, ಜೋಧ್ಪುರ, ಗುವಾಹಟಿ, ಶ್ರೀನಗರ, ಶಿಲ್ಲಾಂಗ್, ಚಂಡೀಗಢ, ಶಿಮ್ಲಾ, ಚೆನ್ನೈ, ಮಧುರೈ, ಕೋಲ್ಕತಾ, ಹೈದರಾಬಾದ್, ಮುಂಬೈ, ಪುಣೆ, ಗಾಂಧಿನಗರ, ಗೋವಾ, ಭೋಪಾಲ್, ಜಬಲ್ಪುರ, ನಾಗ್ಪುರ, ಪಾಟ್ನಾ, ರಾಂಚಿ, ಗಾಜಿಯಾಬಾದ್, ಲಖನೌ ಹಾಗೂ ಡೆಹ್ರಾಡೂನ್ ಸೇರಿ ಹಲವೆಡೆ ಕೇಂದ್ರ ಸರ್ಕಾರದ ಇಲಾಖೆ, ಕೇಂದ್ರಾಡಳಿತ ಪ್ರದೇಶ ಹಾಗೂ ಸಾರ್ವಜನಿಕ ಕಚೇರಿಗಳಲ್ಲಿ ಸಿಬಿಐ ದಾಳಿ ನಡೆಸಿದೆ.