ಮಂಗಳೂರು, ಸೆ. 25 : ಬಿಬಿಎಂಪಿ ಗಮನಸೆಳೆಯಲು ಬಾದಲ್ ನಂಜುಂಡಸ್ವಾಮಿ ಕಲಾವಿದ ವಿಭಿನ್ನವಾಗಿ ಪ್ರತಿಭಟನೆ ಮಾಡುವ ಮೂಲಕ ಗಮನಸೆಳೆದಿದ್ದರು. ಇದೀಗ ಮಂಗಳೂರಿನ ರಸ್ತೆಯಲ್ಲಿ ನಡೆದಾಡುವ ಗಗನಯಾತ್ರಿಯ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಸಾಮಾಜಿಕ ಹೋರಾಟಗಾರ ಅಜೆಯ್ ಡಿಸೋಜಾ ಪುತ್ರಿ ಅಡ್ಲಿನ್ ಡಿಸೋಜಾ ಹೀಗೆ ಗಗನಯಾತ್ರಿಯ ಉಡುಗೆ ತೊಟ್ಟು ರಸ್ತೆ ದುರಸ್ಥಿ ಮಾಡಿಕೊಡಿ ಎಂದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವನ್ನು ಒತ್ತಾಯಿಸಿದ್ದಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ನೆಟ್ಟಿಗರ ಗಮನಸೆಳೆಯುತ್ತಿದೆ.