ಹಾಸನ, ಆ.8 : ಸಕಲೇಶಪುರ ತಾಲೂಕಿನ ಒಸ್ಸೂರು ಎಸ್ಟೇಟ್ ಬಳಿ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಅಡ್ಡಲಾಗಿ ರಸ್ತೆ ಬದಿ ಮರವೊಂದು ಮುರಿದು ಬಿದ್ದು ಅರ್ಧ ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತಗೊಂಡಿತ್ತು.
ಒಸ್ಸೂರು ಎಸ್ಟೇಟ್ ಬಳಿಯ ತಿರುವಿನಲ್ಲಿ ರಸ್ತೆ ಬದಿಯ ಮರವೊಂದು ಭಾರಿ ಗಾಳಿಗೆ ಮುರಿದು ರಸ್ತೆ ಗೆ ಅಡ್ಡಲಾಗಿ ಬಿತ್ತು. ಇದರಿಂದ ರಸ್ತೆಯ ಎರಡೂ ಬದಿ ವಾಹನಗಳು ಸಾಲುಗಟ್ಟಿ ನಿಂತವು. ವಿಷಯ ತಿಳಿದ ಗ್ರಾಮಾಂತರ ಠಾಣೆ ಪೊಲೀಸರು ಹಾಗೂ ಸಕಲೇಶಪುರ ವಲಯ ಅರಣ್ಯಾಧಿಕಾರಿಗಳು, ಸಿಬ್ಬಂದಿ ಸ್ಥಳಕ್ಕೆ ತೆರಳಿ ಮರ ತೆರವುಗೊಳಿಸಿದರು.