ಇಂದು ಬಳ್ಳಾರಿ ಬಂದ್

ಇಂದು ಬಳ್ಳಾರಿ ಬಂದ್

ಬಳ್ಳಾರಿ, ಅ. 1: ಇಂದು ಬೆಳಿಗ್ಗೆ ನಗರದಲ್ಲಿ ಬಂದ್ ಗೆ ಕರೆನೀಡಿದ್ದು, ಜಿಲ್ಲೆಯ ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯನ್ನಾಗಿ ಮಾಡಬೇಕು ಎಂಬ ಸರ್ಕಾರದ ಪ್ರಸ್ತಾಪಕ್ಕೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗಿದ್ದು, ವಿವಿಧ ಸಂಘಟನೆಗಳು ಇಂದು ಬಂದ್ಗೆ ಕರೆ ನೀಡಿವೆ.

ಕನ್ನಡಪರ, ರೈತ, ಕಾರ್ಮಿಕ ಸಂಘಟನೆ, ಚೇಂಬರ್ ಆಫ್ ಕಾಮರ್ಸ್, ಹೋಟೆಲ್ ಅಸೋಸಿಯೇಷನ್ ಬಂದ್ ಗೆ ಬೆಂಬಲ ನೀಡಿದ್ದು, ಬೆಳಗ್ಗೆ 6ರಿಂದ ಬಂದ್ ಬಿಸಿ ಜಿಲ್ಲೆಯ ಜನರಿಗೆ ತಟ್ಟಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ-ಕಾಲೇಜುಗಳಿಗೆ ಬಂದ್ ಮಾಡಲಾಗಿದ್ದು, ಅಂಗಡಿ ಮುಗ್ಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಬಂದ್ಗೆ ಬೆಂಬಲ ನೀಡಿದ್ದಾರೆ.

ಜಿಲ್ಲೆಯ ವಿಭಜನೆಗೆ ಬಿಜೆಪಿ ನಾಯಕರು ವಿರೋಧಿಸಿದ್ದು, ಬಂದ್ಗೆ ಬಿಜೆಪಿ ಶಾಸಕರಾದ  ಸೋಮಶೇಖರ್ ರೆಡ್ಡಿ , ಕರುಣಾಕರ್ ರೆಡ್ಡಿ ಪರೋಕ್ಷವಾಗಿ ಬೆಂಬಲ ನೀಡಿದ್ದಾರೆ.

ನಗರದ ರಾಯಲ್ ವೃತ್ತದಲ್ಲಿ ಬಳ್ಳಾರಿ ವಿಭಜನೆಗೆ ಬೆಂಬಲ ನೀಡಿದ ಅನರ್ಹ ಶಾಸಕ ಆನಂದ್ ಸಿಂಗ್, ಸಿಎಂ ಯಡಿಯೂರಪ್ಪ, ವಿಧಾನಪರಿಷತ್ ಸದಸ್ಯ C  ಕೆ.ಸಿ.ಕೊಂಡಯ್ಯ, ಅಲ್ಲಂ ವೀರಭದ್ರಪ್ಪ ಫೋಟೊಗಳನ್ನು ಕಾಲಲ್ಲಿ ತುಳಿದು ಆಕ್ರೋಶ ವ್ಯಕ್ತಪಡಿಸಲಾಯಿತು. ಬಳ್ಳಾರಿ ಜಿಲ್ಲೆ ಕಳ್ಳರಿಗೆ ಧಿಕ್ಕಾರ ಎಂದು ಘೋಷಣೆ ಕೂಗಿದರು.

 

ಫ್ರೆಶ್ ನ್ಯೂಸ್

Latest Posts

Featured Videos