ರಾಯಚೂರು, ಮೇ. 21, ನ್ಯೂಸ್ ಎಕ್ಸ್ ಪ್ರೆಸ್ : ಕೃಷ್ಣ ಮತ್ತು ಭೀಮಾ ನದಿಗಳಲ್ಲಿ ನೀರು ಕಡಿಮೆ ಆಗಿರುವ ಹಿನ್ನಲೆ ನದಿಯಲ್ಲಿ ಮೊಸಳೆಗಳು ದಡಕ್ಕೆ ಆಗಮಿಸಿದ್ದು, ನೀರು ಕುಡಿಯಲು ಆಗಮಿಸಿದ ಮೂಕ ಜಾನುವಾರಗಳ ಮೇಲೆ ದಾಳಿ ಮಾಡುತ್ತಿವೆ. ಕೃಷ್ಣ ನದಿಯಲ್ಲಿ ನೀರು ಕುಡಿಯಲು ನದಿಗೆ ಇಳಿದ ಎಮ್ಮೆ ಮೇಲೆ ಮೊಸಳೆ ದಾಳಿ ಮಾಡಿದೆ. ಎಮ್ಮೆ ಗಂಭೀರ ಗಾಯಗೊಂಡಿರುವ ಘಟನೆ ರಾಯಚೂರು ಜಿಲ್ಲೆಯಲ್ಲಿ ನಡೆದಿದೆ.
ರಾಯಚೂಚೂರಿ ತಾಲೂಕಿನ ದೇವಸೂಗೂರು ಗ್ರಾಮದ ಕೃಷ್ಣ ನದಿಯಲ್ಲಿ ನೀರು ಕುಡಿಯಲು ನದಿಗೆ ಇಳಿದ ಎಮ್ಮೆ ಮೇಲೆ ಮೊಸಳೆ ದಾಳಿ ಮಾಡಿರೋ ಘಟನೆ ತಾಲೂಕಿನ ದೇವಸೂಗೂರು ಗ್ರಾಮದ ಕೃಷ್ಣಾ ನದಿಯಲ್ಲಿ ನಡೆದಿದೆ. ಮೊಸಳೆ ದಾಳಿಗೆ ಎಮ್ಮೆಯ ಮುಂದಿನ ಎಡಗಾಲು ಕತ್ತರಿಸಿ ಹೋಗಿದೆ. ಆದರೂ,ತನ್ನು ಜೀವ ಉಳಿಸಿಕೊಂಡು ಎಮ್ಮೆ ನದಿಯಿಂದ ಚೀರಾಡುತ್ತಾ ಹೊರಬಂದಿದೆ. ಈ ದೃಶ್ಯವನ್ನು ಅಲ್ಲೇ ಇದ್ದ ಸ್ಥಳೀಯರು ವೀಡಿಯೋ ಮಾಡಿದ್ದಾರೆ.