ನೆಲಮಾಳಿಗೆ, ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸಿದ ಬಿಬಿಎಂಪಿ ಅಧಿಕಾರಿಗಳು

ನೆಲಮಾಳಿಗೆ, ಬೀದಿ ಬದಿ ಅಂಗಡಿಗಳನ್ನು ತೆರವುಗೊಳಿಸಿದ ಬಿಬಿಎಂಪಿ ಅಧಿಕಾರಿಗಳು

ಬೆಂಗಳೂರು:
ಹೈಕೋರ್ಟ್ ಆದೇಶದ ಹಿನ್ನಲೆಯಲ್ಲಿ ಬೊಮ್ಮನಹಳ್ಳಿ ಬಿಬಿಎಂಪಿ ವಲಯದಲ್ಲಿ ನೆಲಮಾಳಿಗೆ ಮತ್ತು ಬೀದಿ ಬದಿ
ಅಂಗಡಿಗಳನ್ನು ಬಿಬಿಎಂಪಿ ಅಧಿಕಾರಿಗಳು ತೆರವುಗೊಳಿಸಿದ್ದಾರೆ.

ಪಾರ್ಕಿಂಗ್ ಸಮಸ್ಯೆಯ ಪರಿಹಾರಕ್ಕೆ ಮುಂದಾಗಿರುವ
ಹೈಕೋರ್ಟ್ ಬಿಬಿಎಂಪಿಗೆ ಖಡಕ್ ವಾರ್ನಿಂಗ್ ಮಾಡಿದ ಹಿನ್ನೆಲೆಯಲ್ಲಿ ಹೆಚ್.ಎಸ್.ಆರ್ ಲೇಔಟ್ ನ 27 ಮತ್ತು
24 ಕ್ರಾಸ್ ಗಳಲ್ಲಿ‌ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ನೆಲಮಾಳಿಗೆಗಳಲ್ಲಿರುವ ಅಂಗಡಿಗಳನ್ನು ಮುಚ್ಚಿಸಲು
ಮುಂದಾಗಿದ್ದಾರೆ.

ಅಂಗಡಿಗಳ ಮುಂದೆ ನಿಲ್ಲಿಸುವ ವಾಹನಗಳಿಂದ ದಿನೇ ದಿನೇ ನಗರದಲ್ಲಿ ಹೆಚ್ಚುತ್ತಿರುವ ಪಾರ್ಕಿಂಗ್ ಸಮಸ್ಯೆ  ಹಿನ್ನೆಲೆಯಲ್ಲಿ ಮಾಲೀಕರಿಂದ ಕಟ್ಟಡ ಮತ್ತು ನೆಲಮಾಳಿಗೆಯನ್ನ ಅಂಗಡಿಗಳ ಮಾಲೀಕರು ಬಾಡಿಗೆಗೆ ಪಡೆದಿದ್ದರು.   ಇತ್ತೀಚೆಗೆ ಪ್ಲೆಕ್ಸ್ ಗಳಿಂದ ನಗರ ಸೌಂದರ್ಯ ನಾಶವಾಗುತ್ತಿದೆ ಎಂದು ಹೈಕೋರ್ಟ್ ಬಿಬಿಎಂಪಿ ವ್ಯಾಪ್ತಿಲಿ ಪ್ಲೆಕ್ಸ್ ನಿಷೇದಿಸಿತ್ತು.

ಫ್ರೆಶ್ ನ್ಯೂಸ್

Latest Posts

Featured Videos