ಇಂದು ಲಂಕಾ, ಭಾರತ ಕದನ

ಇಂದು ಲಂಕಾ, ಭಾರತ ಕದನ

ಇಂದೋರ್. ಜ, 7 : ಮಂಗಳವಾರ ಇಂದೋರ್ನ ಹೋಳ್ಕರ್ ಕ್ರೀಡಾಂಗಣದಲ್ಲಿ ಎರಡನೇ ಪಂದ್ಯ ನಡೆಯಲಿದ್ದು, ಕದನ ಕಹಳೆ ಮೊಳಗಿದೆ. ಸರಣಿ ಜಯಿಸಬೇಕಿದ್ದರೆ, ಮುಂದಿನ ಎರಡೂ ಪಂದ್ಯಗಳ ಕೊನೆಯಲ್ಲಿ ವಿಜಯೋತ್ಸವ ಆಚರಿಸುವುದು ಭಾರತದ ಕ್ರಿಕೆಟ್ ಕಲಿಗಳಿಗೆ ಅನಿವಾರ್ಯ.
ಬಾಂಗ್ಲಾದೇಶ ಹಾಗೂ ವಿಂಡೀಸ್ ವಿರುದ್ಧ ದೊರೆತ ಸರಣಿ ಜಯ ಭಾರತದ ತಂಡಕ್ಕೆ ಅದಮ್ಯ ಉತ್ಸಾಹ ನೀಡಿದೆ ಎಂಬುದು ಆಟಗಾರರ ಭಾವದಲ್ಲೇ ವ್ಯಕ್ತವಾಗುತ್ತಿದೆ. ಹೀಗಾಗಿ ಅದೇ ಲಯ ಮುಂದುವರಿಸುವ ಲಕ್ಷಣಗಳು ತೋರುತ್ತಿವೆ.
ಟಿ20 ವಿಶ್ವಕಪ್ ತನಕ ಭಾರತ ತಂಡದ ಆಟಗಾರರಿಗೆ ಸಾಮರ್ಥ್ಯ ಪರೀಕ್ಷೆಗಳು ನಡೆಯುತ್ತಿರುತ್ತವೆ. ಇಂದೋರ್ ಪಂದ್ಯ ಕೂಡ ಇದಕ್ಕೆ ಹೊರತಲ್ಲ. ಗಾಯದಿಂದ ಚೇತರಿಸಿಕೊಂಡು ತಂಡಕ್ಕೆ ಮರು ಸೇರ್ಪಡೆಯಾಗಿರುವ ಧವನ್ , ಬುಮ್ರಾಗೆ ಗುವಾಹಟಿ ಪಂದ್ಯ ಅಗ್ನಿ ಪರೀಕ್ಷೆ ಎಂದು ಹೇಳಲಾಗಿತ್ತು. ಇಂದೋರ್ ಪಂದ್ಯಕ್ಕೂ ಅನ್ವಯಿಸುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos