ಬೆಂಗಳೂರು,ಮೇ. 29, ನ್ಯೂಸ್ ಎಕ್ಸ್ ಪ್ರೆಸ್: ತಮಿಳುನಾಡು ಮೂಲದ ಅಮಾನುಲ್ಲಾ ಬಾಷಾ ಅವರು 4 ಮದುವೆಯಾಗಿದ್ದ ಅಸಲಿ ಮುಖ ಫೇಸ್ಬುಕ್ ಮೂಲಕ ಹೊರಬಿದ್ದಿರುವ ಘಟನೆ ಬೆಂಗಳೂರಿನ ಲ್ಲಿ ನಡೆದಿದೆ. ದುಬೈನಲ್ಲಿ ಶಿಕ್ಷಕನಾಗಿ ಕೆಲಸ ನಿರ್ವಹಿಸುತ್ತಿದ್ದ ಬಾಷಾ, ವರದಕ್ಷಿಣೆಗೆ ಆಗಾಗ ಭಾರತಕ್ಕೆ ಬಂದು ಅಮಾಯಕ ಹೆಣ್ಣು ಮಕ್ಕಳನ್ನು ಮದುವೆಯಾಗಿ ವಂಚಿಸುತ್ತಿದ್ದನು.
ಮೇ 23 ರಂದು ಕೆ.ಜಿ ಹಳ್ಳಿ ನಿವಾಸಿಯೊಬ್ಬರ ಮಗಳನ್ನು ಅದ್ಧೂರಿಯಾಗಿ ಮದುವೆ ಮಾಡಿದ.ಫೋಟೋಗಳನ್ನು ವಧುವಿನ ಕಡೆಯವರು ಸಾಮಾಜಿಕ ಜಾಣತಾಣದಲ್ಲಿ ಹರಿಬಿಟ್ಟರು. ಇದನ್ನು ಗಮನಿಸಿದ ಮೊದಲ ಹೆಂಡತಿಯರು ಮತ್ತು ಸಂಬಂಧಿಕರು ಯುವತಿಯ ಪಾಲಕರಿಗೆ ಕರೆಗಳನ್ನು ಮಾಡಿ ಪಾಲಕರಿಗೆ, ಸಂಬಂಧಿಕರಿಗೆ ವಿಷಯ ಮುಟ್ಟಿಸಿದ್ದಾರೆ. ಬಾಷಾನ ಅಸಲಿ ಬಣ್ಣ ಬಯಲಾಗಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಕೆ.ಜಿ.ಹಳ್ಳಿ ಪೊಲೀಸರು ಆರೋಪಿ ಮತ್ತು ಆತನ ತಂದೆ ಝಾಕೀರ್ ಹುಸೇನ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.