ಮೈಸೂರು, ಮೇ, 7. ನ್ಯೂಸ್ ಎಕ್ಸ್ ಪ್ರೆಸ್: ಇಂದು ನಾಡಿನೆಲ್ಲೆಡೆ ಬಸವೇಶ್ವರ ಜಯಂತಿಯನ್ನು ಸಡಗರ ಸಂಭ್ರಮದಿಂದ ಆಚರಿಸಲಾಗಿದೆ. ಮೈಸೂರಿನಲ್ಲಿ ಬಸವೇಶ್ವರ ಜಯಂತಿ ಮೆರವಣಿಗೆಯಲ್ಲಿ ಸಚಿವ ಜಿ.ಟಿ. ದೇವೇಗೌಡ ಡ್ಯಾನ್ಸ್ ಮಾಡಿದ್ದಾರೆ.
ಜೆಎಸ್ಎಸ್ ಕಾಲೇಜು ಮುಂಭಾಗದ ಗನ್ ಹೌಸ್ ಬಳಿ ಬಸವಣ್ಣನ ಪುತ್ಥಳಿಗೆ ಸುತ್ತೂರು ಶ್ರೀಗಳು, ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡ ಹಾಗೂ ಶಾಸಕ ಎಲ್.ನಾಗೇಂದ್ರ ಮಾರ್ಲಾರ್ಪಣೆ ಮಾಡಿದರು. ಬಳಿಕ ಸೂತ್ತುರು ಶ್ರೀಗಳು ಮೆರವಣಿಗೆಗೆ ಚಾಲನೆ ನೀಡಿದರು.
ಬಸವೇಶ್ವರ ಜಯಂತಿ ಅಂಗವಾಗಿ ಅದ್ದೂರಿ ಮೆರವಣಿಗೆ ನಡೆಸಲಾಗಿದ್ದು, ಕೇರಳದ ಚೆಂಡೆ ನಾದಕ್ಕೆ ಮತ್ತು ತಮಟೆ ಸದ್ದಿಗೆ ಸಚಿವ ಜಿ.ಟಿ. ದೇವೇಗೌಡ ಸ್ಟೆಪ್ ಹಾಕಿದ್ದಾರೆ. ಸಚಿವರ ಡ್ಯಾನ್ಸ್ ಗೆ ಫಿದಾ ಆದ ಮೆರವಣಿಗೆಯಲ್ಲಿ ಪಾಲ್ಗೊಂಡವರು ಶಿಳ್ಳೆ ಹಾಕಿ ಸಂಭ್ರಮಿಸಿದ್ದು, ಸಚಿವರನ್ನು ಹುರಿದುಂಬಿಸಿದ್ದಾರೆ.