ದೊಡ್ಡಬಳ್ಳಾಪುರ, ಸೆ. 13: ದಕ್ಷಿಣ ಭಾರತದಲ್ಲಿ ಸುಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಒಂದಾದ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಶ್ರೀ ಸುಬ್ರಹ್ಮಣ್ಯ ಘಾಟಿ ಕ್ಷೇತ್ರದಲ್ಲಿ ಇಂದು ಹುಂಡಿ ಕಾಣಿಕೆ ಎಣಿಕೆ ಕಾರ್ಯ ನಡೆಯಿತು.
ಹುಂಡಿಗೆ ಭಕ್ತರು ಹಾಕಿರುವ ನಗದು ಮೊತ್ತ ಬರೊಬ್ಬರಿ ರೂ.37,19,504 ಲಕ್ಷ ಆಗಿದೆ.
ಇನ್ನು ಬಂಗಾರ 2.760ಗ್ರಾಂ,ಬೆಳ್ಳಿ 530 ಗ್ರಾಂ,ಇದರ ಜೊತೆಗೆ 3 ಅಮೆರಿಕ ಡಾಲರ್,2 ಸಿಂಗಪುರ್ ಡಾಲರ್, ಒಂದು ಅರೇಬಿಯನ್ ಡಾಲರ್ ಹಾಗೂ ಬ್ಯಾನ್ ಮಾಡಲಾದ 2 ಸಾವಿರ ಮುಖಬೆಲೆಯ ನೋಟು,36 ಐನೂರು ಮುಖಬೆಲೆಯ ನೋಟುಗಳು ಸಹ ಹುಂಡಿಯಲ್ಲಿ ಸಿಕ್ಕಿವೆ.
ಎಣಿಕೆ ಕಾರ್ಯ ಮುಜರಾಯಿ ಇಲಾಖೆ ತಹಸೀಲ್ದಾರ್ ಪದ್ಮ ಮತ್ತು ಘಾಟಿ ಕಾರ್ಯನಿರ್ವಾಹಣಾಧಿಕಾರಿ ಕೇಷ್ಣಪ್ಪ ಸಮ್ಮುಖದಲ್ಲಿ ನಡೆಯಿತು. ದೇವಾಲಯ ವ್ಯವಸ್ಥಾಪಕ ಸಮಿತಿ ಸದಸ್ಯರುಸಿಬ್ಬಂದಿ ಹಾಜರಿದ್ದರು.