ಬೆಂಗಳೂರಿನಲ್ಲಿ ವರುಣನ ಅಬ್ಬರ

ಬೆಂಗಳೂರಿನಲ್ಲಿ ವರುಣನ ಅಬ್ಬರ

ಬೆಂಗಳೂರು, ಅ. 4 : ಬೆಂಗಳೂರಿನಲ್ಲಿ ಮಳೆ ಆಗುತ್ತಿದೆ. ಇಂದು ಕೂಡ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಮಳೆಯಿಂದ ಕಿರಿಕಿರಿ ಉಂಟಾದರೂ ಅಚ್ಚರಿ ಇಲ್ಲ. ನಗರದಲ್ಲಿ ಮೋಡ ಮುಸಿಕದ ವಾತಾವರಣ ಇದೆ. ಸಣ್ಣ ಪ್ರಮಾಣ ಇಬ್ಬನಿ ಕೂಡ ಬೀಳುತ್ತಿದೆ. ಮಧ್ಯಾಹ್ನ ಸೂರ್ಯನ ದರ್ಶನ ಆಗಲಿದೆ. ಸಂಜೆ 7 ಗಂಟೆ ನಂತರದಲ್ಲಿ ಭಾರೀ ಮಳೆ ಆಗಲಿದೆ. ರಾತ್ರಿ ಕೂಡ ಮಿಂಚು-ಗುಡುಗು ಸಹಿತ ವರುಣ ಅಬ್ಬರಿಸಲಿದ್ದಾನೆ. ಬೆಂಗಳೂರಿನಲ್ಲಿ ಇನ್ನೂ ಕೆಲ ದಿನಗಳ ಕಾಲ ಇದೇ ವಾತಾವರಣ ಮುಂದುವರಿಯಲಿದೆಯಂತೆ. ಬೆಳಗ್ಗೆ ಬಿಸಿಲು ಕಾಣಿಸಿಕೊಂಡರೂ ಸಂಜೆ ವೇಳೆಗೆ ಮಳೆ ಆಗಲಿದೆ.
ಮೆಜೆಸ್ಟಿಕ್, ಮೈಸೂರು ಬ್ಯಾಂಕ್ ಸರ್ಕಲ್, ಸಂಜಯ್ ನಗರ, ಹೆಬ್ಬಾಳ, ಶಾಂತಿ ನಗರ, ಯಶವಂತಪುರ, ಕೋರಮಂಗಲ, ಶ್ರೀನಿವಾಸ ನಗರ, ಗಿರಿ ನಗರ ಸೇರಿ ಹಲವು ಸ್ಥಳಗಳಲ್ಲಿ ನಿರಂತರವಾಗಿ ಮಳೆಯಾಗಿತ್ತು. ಇದೇ ರೀತಿ ಇಂದು ಕೂಡ ಮಳೆ ಸುರಿಯಲಿದೆ.

ಫ್ರೆಶ್ ನ್ಯೂಸ್

Latest Posts

Featured Videos