ಬೆಂಗಳೂರು, ಏ. 17, ನ್ಯೂಸ್ ಎಕ್ಸ್ ಪ್ರೆಸ್: ಬೆಂಗಳೂರಿನಲ್ಲಿ ಇಂದು ಹಲವೆಡೆ ಮಳೆ ಆಗಿದೆ. ಕೆಲವೆಡೆ ಆಲಿಕಲ್ಲು ಸಹಿತ ಮಳೆ ಆಗಿದೆ.
ಇನ್ನೂ 2-3 ದಿನಗಳು ಬೆಂಗಳೂರು ಸೇರಿದಂತೆ ಮಂಡ್ಯ,ತುಮಕುರು, ದಕ್ಷಿಣ ಒಳನಾಡಿನಲ್ಲಿ ಮಳೆ ಆಗುವ ನಿರೀಕ್ಷೆ ಇದೆ. ಹವಾಮಾನ ಇಲಾಖೆ ಈ ಬಗ್ಗೆ ಮುನ್ಸೂಚನೆ ನೀಡಿದೆ.
ಕೆಲ ದಿನಗಳ ಹಿಂದೆ ಬೆಂಗಳೂರಲ್ಲಿ ಲಘುವಾಗಿ ಆಗಿದ್ದ ಮಳೆ ಇಂದು ಸ್ವಲ್ಪ ಬಿರುಸು ಪಡೆದುಕೊಂಡಿತ್ತು. ಆದರೆ ನಿರೀಕ್ಷಿತ ಮಟ್ಟದಲ್ಲಿ ಮಳೆ ಆಗದೇ ಇದ್ದದ್ದು ಬೇಸರ ಮೂಡಿಸಿದೆ. ಕಪ್ಪು ಗಟ್ಟಿದ್ದ ಮೋಡದಿಂದ ಹೆಚ್ಚಿನ ಮಳೆಯೇನೂ ಧರೆಗೆ ಇಳಿಯಲಿಲ್ಲ.