ಬೆಂಗಳೂರಿನಲ್ಲಿ 5 ಕಡೆ ಎಸಿಬಿ ದಾಳಿ

ಬೆಂಗಳೂರಿನಲ್ಲಿ 5 ಕಡೆ ಎಸಿಬಿ ದಾಳಿ

ಬೆಂಗಳೂರು, ಮೇ. 4, ನ್ಯೂಸ್ ಎಕ್ಸ್ ಪ್ರೆಸ್: ಇಂದು ಬೆಳಿಗ್ಗೆ ನಗರದಲ್ಲಿ 5 ಕಡೆ ಎಸಿಬಿ ದಾಳಿ ನಡೆಸಿದೆ. ಅಭಿವೃದ್ಧಿ ಹಕ್ಕು ವರ್ಗಾವಣೆ ಟಿಡಿಆರ್ ಹಗರಣದ ಜೊತೆ ನಂಟಿರುವ ಆರೋಪದ ಮೇಲೆ  ರತನ್ ಲಾಲ್, ಅಮಿತ್ ಬೋಳಾರ್, ಕೆ ಗೌತಮ್ ಹಾಗೂ ಮುನಿರಾಜಪ್ಪ ಎಂಬವರ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಲಾಗಿದೆ. ಸರ್ಕಾರಕ್ಕೆ ವಂಚಿಸಿದ ಆರೋಪದ ಮೇಲೆ 5 ಕಂಪನಿಗಳ ಮೇಲೆ ಏಕಕಾಲಕ್ಕೆ 5 ಡಿವೈಎಸ್ ಪಿಗಳ ತಂಡ, ಎಸ್ ಪಿ ಸಂಜೀವ್ ಪಾಟೀಲ್ ಹಾಗೂ ಎಸಿಪಿ ರವಿಕುಮಾರ್ ದಿಢೀರ್ ದಾಳಿ ನಡೆಸಿದ್ದಾರೆ.

ಬಿಬಿಎಂಪಿ ಹಾಗೂ ಬಿಡಿಎಯಿಂದ ವಾಲ್ ಮಾರ್ಕ್ ಕಂಪನಿ ಅಕ್ರಮವಾಗಿ ಟಿಡಿಆರ್ ಗಳಿಸಿತ್ತು. ಹೀಗಾಗಿ ವಾಲ್ ಮಾರ್ಕ್ ಕಂಪನಿ ಮಾಲೀಕ ರತನ್ ಲಾಲ್ ಕಚೇರಿ ಹಾಗೂ ನಿವಾಸಗಳ ಮೇಲೆ ದಾಳಿ ನಡೆಸಲಾಗಿದೆ. ಇಂದಿರಾನಗರ, ಕೆಆರ್ ಪುರ ಹಾಗೂ ಹೆಚ್ ಎಎಲ್ ನಲ್ಲಿ, ವಾಲ್ ಮಾರ್ಕ್ ಕಂಪನಿ ಸೇರಿದಂತೆ ಒಟ್ಟು 5 ಕಂಪನಿಗಳ ಮೇಲೆ ದಾಳಿ ನಡೆದಿದೆ. ರೆಸಿಡೆನ್ಸಿ ರಸ್ತೆಯಲ್ಲಿ ರತನ್ ಲಾಲ್ ನಿವಾಸ, ಹಾಗೂ ಎಚ್ಎಎಲ್ ಬಳಿಯಿರುವ ಅವರ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿದೆ.

 

ಫ್ರೆಶ್ ನ್ಯೂಸ್

Latest Posts

Featured Videos