ಬೆಂಗಳೂರು, ಅ. 19 : ಕೂಡಲೇ ಬನ್ನೇರುಘಟ್ಟ ರಸ್ತೆ ಜಯದೇವ ಜಂಕ್ಷನ್ ನಲ್ಲಿ ಮೆಟ್ರೊ ಇಂಟರ್ ಚೇಂಜ್ ನಿಲ್ದಾಣ ಕಾಮಗಾರಿ ಆರಂಭವಾಗಲಿದೆ. ಬಿಬಿಎಂಪಿ ಮತ್ತು ಬಿಎಂ ಆರ್ ಸಿಎಲ್ ತಲಾ ಶೇ 50 ರಷ್ಟು ಕಾಮಗಾರಿಗಳನ್ನು ನಿರ್ವಹಿಸಲಿವೆ, ಹೀಗಾಗಿ ಜಂಟಿಯಾಗಿ ಪರಿಶೀಲನೆ ನಡೆಸಲಾಯಿತು ಬಿಎಚ್. ಆನಿಲ್ ಕುಮಾರ್ ಎಂದು ಹೇಳಿದರು.
ಮೆಟ್ರೋ ರೈಲು ನಿಗಮ ಕಾಮಗಾರಿ ಸಂಬಂಧ ಪಟ್ಟಂತೆ ಮೆಟ್ರೊ ರೈಲು ನಿಗಮ( ಬಿಎಂಆರ್ ಸಿಎಲ್) ವ್ಯವಸ್ಥಾಪಕ ನಿರ್ಧೇಶಕ ಅಜಯ್ ಸೇಠ್, ಬಿಬಿಎಂಪಿ ಆಯುಕ್ತ ಬಿಎಚ್. ಆನಿಲ್ ಕುಮಾರ್, ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಕಾಮಗಾರಿ ಸಂಬಂಧ ಜಂಟಿ ಪರಿಶೀಲನೆ ನಡೆಸಿ, ಗೊಟ್ಟಿಗೆರೆ- ನಾಗವಾರ ಮಾರ್ಗ ಹಾಗೂ ಆರ್, ವಿ. ರಸ್ತೆ- ಸಿಲ್ಕ್ ಬೊರ್ಡ್ ಮೆಟ್ರೋ ಮಾರ್ಗಗಳು ಇಲ್ಲಿ ಪರಸ್ಪರ ಸಂಧಿಸಲಿವೆ. ಎರಡು ಎತ್ತರಿಸಿಸ ಮಾರ್ಗಗಳು ಹಾಗೂ ಮೂರು ಗ್ರೇಡ್ ಸೆಪರೇಟ್ ಗಳನ್ನು ಒಳಗೊಂಡ ಐದು ಹಂತಗಳ ಸಂಚಾರ ವ್ಯವಸ್ಥೆ ಇಲ್ಲಿ ನಿರ್ಮಾಣ ವಾಗಲಿದೆ.