ಮುಂಬೈ: ಬಾಲಿವುಡ್ ನಟ ಆದಿತ್ಯ ಪಾಂಚೋಲಿ ಮೇಲೆ ಇದೀಗ ಜೀವ ಬೆದರಿಕೆ ಆರೋಪ ಕೇಳಿ ಬಂದಿದೆ. ಅಷ್ಟೆ ಅಲ್ಲ ಈ ವಿರುದ್ಧ ಅವರ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಾಗಿದೆ.
ಕಾರ್ ರಿಪೇರಿ ಹಣ ಸಂಬಂಧ ಜಗಳ:
ಹೌದು, ಕಾರ್ ಮೆಕ್ಯಾನಿಕಲ್ ಅಂಗಡಿಯೊಂದರಲ್ಲಿ ಆದಿತ್ಯ ಕಾರು ರಿಪೇರಿ ಮಾಡಿಸಿದ್ದರಂತೆ. ಈ ಹಣ ಎರಡು ಲಕ್ಕ್ಕಕೂ ಅಧಿಕವಾಗಿದೆ. ಆದರೆ ಈ ಹಣವನ್ನು ಮೆಕ್ಯಾನಿಕಲ್ ಶಾಪ್ ಮಾಲೀಕ ಕೇಳಿದ್ದಕ್ಕೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.
506ರ ಅಡಿಯಲ್ಲಿ ಕೇಸ್ ದಾಖಲು:
ಇನ್ನು ಈ ವಿಚಾರವಾಗಿ ಮುಂಬೈನ ವಾರ್ಸೋರಾ ಠಾಣೆಯಲ್ಲಿ ದೂರು ದಾಖಲು ಮಾಡಲಾಗಿದೆ. ಇನ್ನು ಐಪಿಸಿ ಸೆಕ್ಷನ್ 506ರ ಅಡಿಯಲ್ಲಿ ಕೇಸ್ ದಾಖಲು ಮಾಡಲಾಗಿದ್ದು, ತನಿಖೆ ಮುಂದುವರೆಸಿದ್ದಾರೆ ಪೊಲೀಸರು.