ಹಾಸನ, ಏ. 1, ನ್ಯೂಸ್ ಎಕ್ಸ್ ಪ್ರೆಸ್: ಹೊಳೆನರಸೀಪುರ ತಾಲ್ಲೂಕಿನ ಮೊಸಳೆಹೊಸಳ್ಳಿ ಸಮೀಪದ ಅಂಚಿಹಳ್ಳಿಯಲ್ಲಿ ದೇವರಿಗೆ ಅರ್ಪಿಸಲೆಂದು ಇಡಲಾಗಿದ್ದ ಹಣ್ಣು ತೆಗೆಯಲು ವಾಡೆ(ಬಾಳೆಕಾಯಿ ಹಣ್ಣುಮಾಡುವ ಗುಂಡಿ)ಯೊಳಗೆ ಇಳಿದ ವೇಳೆ ರಾಸಾಯನಿಕ ಗಾಳಿ ಸೇವಿಸಿ ಇಬ್ಬರು ಮೃತಪಟ್ಟಿರುವ ಘಟನೆ ನಡೆದಿದೆ.
ಚಂಡಿಕಾಂಬ ದೇವಾಲಯದ ಅಭಿಷೇಕಕ್ಕಾಗಿ 8 ಅಡಿ ವಾಡೆಯೊಳಗಿನ ಬಾಳೆ ಹಣ್ಣು ತೆಗೆಯಲು ಹೋಗಿ ಘಟನೆ ನಡೆದಿದ್ದು, ಇಬ್ಬರು ಉಸಿರುಕಟ್ಟಿ ಅಸ್ವಸ್ಥಗೊಂಡು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮಂಜೇಗೌಡ(45),ವೆಂಕಟೇಶ್(50) ಮೃತಪಟ್ಟಿದ್ದಾರೆ.