ಕುಮಟಾ, ಜೂ. 26 : ಮೂರುವರೆ ವರ್ಷದ ಹೆಣ್ಣು ಮಗು ಕಾಲುಜಾರಿ ಹಳ್ಳಕ್ಕೆ ಬಿದ್ದು ಸಾವನ್ನಪ್ಪಿದ ಘಟನೆ ಗುಡಾಳದಲ್ಲಿ ಬುಧವಾರ ನಡೆದಿದೆ.
ಪಲ್ಲವಿ ಯಾದವ ಗೌಡ ಮೃತಪಟ್ಟವಳು.
ಯಾಣದ ನಿವಾಸಿ ಯಾಗಿರುವ ಈಕೆ ಅಜ್ಜಿ ಮನೆಗೆ ಬಂದಿದ್ದಾಗ ದುರ್ಘಟನೆ ನಡೆದಿದೆ. ಮನೆಯ ಸಮೀಪವೇ ಓಡಾಡುವಾಗ ಆಯ ತಪ್ಪಿ ಬಿದ್ದಿದ್ದಾಳೆ. ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಶಾಸಕ ದಿನಕರ ಶೆಟ್ಟಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ.