ಬೆಂಗಳೂರು, ಜು. 10: ನಗರದಲ್ಲಿ ಎರಡು ಕಟ್ಟಡ ನೆನ್ನೆ ರಾತ್ರಿ 1.30 ಸುಮಾರಿಗೆ ಕುಸಿದಿದೆ ಕೂಡಲೇ ಪೊಲೀಸರು ಅಗ್ನಿಶಾಮಕ ಸಿಬ್ಬಂಧಿ ಬಂದಿದ್ದಾರೆ.
ರಕ್ಷಣಾ ಕಾರ್ಯಾ ನಡೆಯುತ್ತಿದೆ ಕಟ್ಟಡ ನಿರ್ಮಾಣಕ್ಕೆ ಯಾವ ರೀತಿ ಮೆಟಿರಿಯಲ್ ಬಳಸಿದ್ದಾರೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಬಳಿಕ ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೇನೆ ಎಂದು ಡಿಸಿಎಂ ಪರಮೇಶ್ವರ ಹೇಳಿಕೆ ನೀಡಿದ್ದಾರೆ.
ಬೆಂಗಳೂರು ನಗರದಲ್ಲಿ ಅಕ್ರಮವಾಗಿ ನಿರ್ಮಾಣವಾಗಿರುವ ಕಟ್ಟಡ ಗುರುತಿಸಿ ತೆರವಿಗೆ ಆದೇಶಿಸಿದ್ದೇನೆ ಮೃತ ಕುಟುಂಬಸ್ಥರಿಗೆ 5 ಲಕ್ಷ ಪರಿಹಾರ ನೀಡಲಾಗುವುದು. ಈ ಎರಡು ಕಟ್ಟಡದಲ್ಲಿ ಇನ್ನು ಕೇಲವರು ಸಿಲುಕಿದ್ದಾರೆ ಎಂಬ ಶೆಂಕೆ ಇದೆ ಅವರನ್ನು ಹೊರ ತರುವ ಕಾರ್ಯ ಮುಂದುವರೆದಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ ಡಿಸಿಎಂ ಪರಮೇಶ್ವರ ಅವರು ತಿಳಿಸಿದ್ದಾರೆ.