ಜಯನಗರ, ಸೆ. 3: ಸರ್ವಧರ್ಮ ಸಾಮೂಹಿಕ ಬಾಗಿನ ವಿತರಣೆ ಗೌರಿ ಹಾಗೂ ಗಣೇಶ ಹಬ್ಬದ ಪ್ರಯುಕ್ತ ಜಯನಗರದಲ್ಲಿ ರುವನಮ್ಮ ಮನೆಯಲ್ಲಿ ಸುಮಾರು 900 ಜನ ಮುತ್ತೈದೆಯರಿಗೆ ಮಹಾನಗರ ಪಾಲಿಕೆ ಸದಸ್ಯರಾದ ಹೆಚ್.ಸಿ.ನಾಗರತ್ನ ರಾಮಮೂರ್ತಿರವರು ಸಾಂಪ್ರದಾಯಿಕವಾಗಿ ಅರಿಶಿನ ಕುಂಕುಮ ಕೊಟ್ಟು ಬಾಗಿನ ನೀಡಲಾಯಿತು. ಈ ಸಂದರ್ಭದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯೆ ತಾರಾ ಅನುರಾಧಾ, ಬಿಜೆಪಿ ಮುಖಂಡರಾದ ಮಾಳವಿಕ ಅವಿನಾಶ್ ಹಾಗೂ ಜಯನಗರ ಶಾಸಕಿ ಆರ್.ಸೌಮ್ಯ ರೆಡ್ಡಿರವರು ಪಾಲ್ಗೊಂಡಿದ್ದರು.