ಮತ್ತೆ ನರಗುಂದಲ್ಲಿ ಭೂ ಕುಸಿತ

ಮತ್ತೆ ನರಗುಂದಲ್ಲಿ ಭೂ ಕುಸಿತ

ಗದಗ, ಜು.02 : ನರಗುಂದ ತಾಲೂಕಿನ ಪದೇಪದೇ ಭೂಕುಸಿತ ಕಂಡುಬರುತ್ತಿದ್ದು, ಇಂದು ಕೂಡಾ ನಗರದ ಶಂಕರಲಿಂಗ ಓಣಿಯ ಅಂಬೋಜಿಯವರ್ ಎಂಬುವವರ ಮನೆ ಮುಂದೆ ಭೂಮಿ ಕುಸಿದಿದ್ದು , ಸುತ್ತಮುತ್ತಲಿನ ಸ್ಥಳೀಯರು ಆತಂಕಕ್ಕೆ ಒಳಗಾಗಿದ್ದಾರೆ. ಸಾರ್ವಜನಿಕರು ಓಡಾಡುವ ಜಾಗದಲ್ಲೇ ಸುಮಾರು 10 ಅಡಿಗಳಷ್ಟು ಭೂಮಿ ಕುಸಿದುಕೊಂಡಿದೆ. ಸಣ್ಣ ಸಣ್ಣ ಮಕ್ಕಳು ಕೂಡಾ ಇಲ್ಲಿ ಆಟವಾಡುತ್ತಿರುತ್ತಾರೆ. ಎರಡೂ ಮೂರು ಬಾರಿ ಇಲ್ಲಿ ಭೂಮಿ ಕುಸಿಯುತ್ತಿರುವುದು ಜನರ ಭಯಕ್ಕೆ ಕಾರಣವಾಗಿದೆ. ಈ ಭಾಗದಲ್ಲಿ ಅಂತರ್ಜಲ ಹೆಚ್ಚಾಗಿರುವುದರಿಂದ ಮತ್ತೆ ಮತ್ತೆ ಭೂಮಿ ಕುಸಿಯುತ್ತಿದೆ ಎಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸ್ಥಳಕ್ಕೆ ನರಗುಂದ ಪುರಸಭೆಯ ಮುಖ್ಯಾಧಾಕಾರಿ ಸಂಗಮೇಶ ಬ್ಯಾಳಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಈ ಹಿಂದೆ ಕೂಡಾ ಅನೇಕ ಬಾರಿ ಇಲ್ಲಿ ಭೂ ಕುಸಿತ ಸಂಭವಿಸಿದೆ. ಈ ಕಾರಣ ವಿಜ್ಞಾನಿಗಳ ಎರಡು ತಂಡವನ್ನು ಕರೆಸಿ ಪರಿಶೀಲನೆ ನಡೆಸಿ ಭೂಕುಸಿತಕ್ಕೆ ನಿಖರ ಕಾರಣ ಏನು ಎಂಬುದನ್ನು ತಿಳಿಯಲು ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ. ಪಾಟೀಲ್ ಸೂಚಿಸಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos