ಶ್ರೀನಗರ, ಆ. 3: ಜಮ್ಮು ಕಾಶ್ಮೀರದಲ್ಲಿ ಭಾರತೀಯ ಸೇನೆಯಿಂದ ಬಂಧಿತ ಇಬ್ಬರು ಉಗ್ರರು ಪಾಕಿಸ್ಥಾನದ ಮಹಾ ಸಂಚಿನ ಬಗ್ಗೆ ಬಾಯಿ ಬಿಟ್ಟಿದ್ದಾರೆ. ಕಾಶ್ಮೀರದ ಒಳಗೆ ಉಗ್ರರನ್ನು ಕಳುಸಿ ವಿಧ್ವಂಸಕ ಕೃತ್ಯ ನಡೆಸಲು ಪಾಕಿಸ್ಥಾನ ತಯಾರಿ ನಡೆಸುತ್ತಿದೆ ಎಂದು ಭಾರತೀಯ ಸೇನೆಗೆ ಉಗ್ರರು ಮಾಹಿತಿ ನೀಡಿದ್ದಾರೆ.
ಭಾರತೀಯ ಸೇನೆ ಬಂಧಿಸಿದ ಖಲೀಲ್ ಅಹಮದ್ ಮತ್ತು ನಜೀಂ ಖೋಕರ್ ಎಂಬ ಇಬ್ಬರು ಉಗ್ರರು ಹಲವು ಮಹತ್ವದ ಮಾಹಿತಿ ಬಹಿರಂಗಗೊಳಿಸಿದ್ದು, ಪಾಕಿಸ್ಥಾನದ ಸೇನೆ ಹಲವು ಉಗ್ರರಿಗೆ ತರಬೇತಿ ನೀಡುತ್ತಿದ್ದು, ಭಾರತದ ಗಡಿಯೊಳಗೆ ಕಳುಹಿಸಿ ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ತಯಾರಿ ನಡೆಸುತ್ತಿದೆ ಎಂದು ಹೇಳಿದ್ದಾರೆ.
ಲಶ್ಕರ್ ಸಂಘಟನೆ ತರಬೇತಿ ಪಡೆದ ಏಳು ಉಗ್ರರನ್ನು ಭಾರತದ ಒಳಗೆ ಕಳುಹಿಸಿದೆ ಎಂಬ ಸ್ಫೋಟಕ ಮಾಹಿತಿ ಬಹಿರಂಗಪಡಿಸಿದ್ದಾರೆ. ಖಲೀಲ್ ಅಹಮದ್ ಮತ್ತು ಖೋಕರ್ ಕೂಡಾ ಇದೇ ಗುಂಪಿನ ಉಗ್ರರಾಗಿದ್ದು, ತಂಡದಲ್ಲಿ ಮೂವರು ಅಫ್ಘಾನ್ ಪ್ರಜೆಗಳಿದ್ದಾರೆ. ಭಾರತೀಯ ಸೇನೆಯ ಇವರ ಪ್ರಮುಖ ಟಾರ್ಗೆಟ್ ಎಂದು ಹೇಳಿದ್ದಾರೆ.