ಮಂಡ್ಯ, ಮೇ,03, ನ್ಸೊಸ್ ಏಕ್ಸ್ ಪ್ರಸ್: ಬುಧವಾರ ರಾತ್ರಿ ಸುರಿದ ಭಾರಿ ಗಾಳಿ ಸಹಿತ ಮಳೆಗೆ ಬಾಳೆತೋಟ ನಾಶವಾಗಿದೆ. ನಾಗ ದೊಡ್ಡಿಯ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಬಿ.ನಾಗರಾಜು ಎಂಬುವರಿಗೆ ಸೇರಿದ ತೋಟ ಇದಾಗಿದ್ದು, 1,000ಕ್ಕೂ ಹೆಚ್ಚು ಬಾಳೆ ಸಸಿಗಳು ಹಾಳಾಗಿವೆ. ಒಂದು ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಏಲಕ್ಕಿ ತೋಟವೂ ನಾಶವಾಗಿದೆ, ಕಟಾವಿಗೆ ಬಂದ್ದಿದ ಬಾಳೆ ಗೊನೆಗಳು ಹಾಳಾಗಿವೆ. ಫಸಲು ಕೈಗೆ ಸಿಗುವ ಹೊತ್ತಿನಲ್ಲಿ ಎಲ್ಲಾ ಬೆಳೆಯು ಹಾಳಾಗಿದೆ ಎಂದು ತಮ್ಮ ನೋವನ್ನು ಹೇಳಿಕೊಂಡಿದ್ದಾರೆ. ಇದ್ದಕೆ ಸೊಕ್ತ ಪರಿಹಾರ ನೀಡಬೇಕೆಂದು ನಾಗರಾಜು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.