ದೇಶಕ್ಕಾಗಿ ಮೋದಿ ನಿಸ್ವಾರ್ಥ ಸೇವೆ ಮಾಡಿದ್ದಾರೆ: ಬಿ.ವೈ. ರಾಘವೇಂದ್ರ

ದೇಶಕ್ಕಾಗಿ ಮೋದಿ ನಿಸ್ವಾರ್ಥ ಸೇವೆ ಮಾಡಿದ್ದಾರೆ: ಬಿ.ವೈ. ರಾಘವೇಂದ್ರ

ಶಿವಮೊಗ್ಗ: ರಾಜ್ಯದಲ್ಲಿ ಲೋಕಸಭಾ ಚುನಾವಣೆ ಇನ್ನೇನು ಒಂದೇ ದಿನ ಬಾಕಿ ಉಳಿದಿದೆ, ಅಭ್ಯರ್ಥಿಗಳು ರಾಜ್ಯದಲ್ಲೇ ಭರ್ಜರಿ ಪ್ರಚಾರ ಮಾಡಿದ್ದರು. ಶಿವಮೊಗ್ಗ ಲೋಕಸಭಾ ಕ್ಷೇತ್ರ ಈ ಬಾರಿ ಜಿದ್ದಾಜಿದ್ದಿಗೆ ಕಾರಣವಾಗಿದೆ, ಈ ಬಾರಿ ಬಿಜೆಪಿ ಅಭ್ಯರ್ಥಿಯಾಗಿ ಬಿ.ವೈ. ರಾಘವೇಂದ್ರ ಅವರು ಸ್ಪರ್ಧಿಸುತ್ತಿದ್ದಾರೆ.

ನಿನ್ನೆ ಭದ್ರಾವತಿ ಕನಕ ಮಂಟಪದಲ್ಲಿ ಬಿಜೆಪಿಯಿಂದ ತಾಲೂಕು ತಮಿಳು ಭಾಷಿಗರ ಸಾರ್ವಜನಿಕ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ನರೇಂದ್ರ ಮೋದಿಯನ್ನು ಜನತೆ ದೇಶದ ಪ್ರಧಾನ ಮಂತ್ರಿಯನ್ನಾಗಿ ಅರಿಸಿದ ಮೇಲೆ ಅವರು ಕಳೆದ ಹತ್ತು ವರ್ಷಗಳಲ್ಲಿ ದೇಶದ ಅಭಿವೃದ್ಧಿಗೆ ಸಾಕಷ್ಟು ಕೆಲಸ ಮಾಡಿ ವಿಶ್ವನಾಯಕರಾಗಿ ಬೆಳೆದಿದ್ದಾರೆ.

ಮೋದಿ ಅವರು ದೇಶಕ್ಕಾಗಿ ನಿಸ್ವಾರ್ಥವಾಗಿ ಮಾಡಿರುವ ಕೆಲಸಕ್ಕಾಗಿ ಅವರಿಗೆ ಕೂಲಿ ರೂಪದಲ್ಲಿ ಬಿಜೆಪಿ ಅಭ್ಯರ್ಥಿಗೆ ಮತಹಾಕಿ ಮೋದಿಯವರನ್ನು ಮತ್ತೂಮ್ಮೆ ದೇಶದ ಪ್ರಧಾನಿಯನ್ನಾಗಿ ಮಾಡೋಣ. ಯಡಿಯೂರಪ್ಪ, ರಾಘವೇಂದ್ರ, ಮೋದಿ ಅವರು ತಮಿಳು ಭಾಷಿಗರ ಅಭಿವೃದ್ಧಿಗೆ ಕೆಲಸ ಮಾಡುತ್ತ ಬಂದಿದ್ದಾರೆಂಬುದನ್ನು ನಾವು ತಮಿಳು ಭಾಷಿಗರು ನೆನೆದು ಅವರ ಗೆಲುವಿಗಾಗಿ ಬಿಜೆಪಿಗೆ ಮತ ಹಾಕಿ ಎಂದರು.

ಈ ಸಂದರ್ಭದಲ್ಲಿ ಮಾಜಿ ವಿಧಾನ ಪರಿಷತ್‌ ಸದಸ್ಯ ಭಾನುಪ್ರಕಾಶ್‌, ಮುಖಂಡರಾದ ಕೂಡ್ಲಿಗೆರೆ ಹಾಲೇಶ್‌, ಕದಿರೇಶ್‌, ದತ್ತಾತ್ರಿ, ಪಕ್ಷದ ಜಿಲ್ಲಾಧ್ಯಕ್ಷ ಮೇಘರಾಜ್‌, ಜೆಡಿಎಸ್‌ ಅಧ್ಯಕ್ಷ ಕರುಣಾಮೂರ್ತಿ, ಶಾರದಾಪ್ಪಾಜಿ ಉಪಸ್ಥಿತಿಯಿದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos