ಚಿಕ್ಕಮಗಳೂರು, ಏ. 11, ನ್ಯೂಸ್ ಎಕ್ಸ್ ಪ್ರೆಸ್: ಮಾಜಿ ಸಿಎಂ,ಹಾಲಿ ಶಾಸಕ ಸಿದ್ದರಾಮಯ್ಯ ನವರು, ತಮ್ಮ ಪಕ್ಷದ ಕಾರ್ಯಕರ್ತನಿಗೆ ಮುಚ್ಚಯ್ಯ ಬಾಯಿ, ಕಪಾಳೆಕ್ಕೆ ಹೊಡೆದು ಬಿಡ್ತಿನಿ ನೋಡು, ಅಂತ ಅವಾಜ್ ಹಾಕಿದ್ದಾರೆ.
ಸಿದ್ದರಾಮಯ್ಯ ನವರು ಇಂದು ಚಿಕ್ಕಮಗಳೂರು ಜಿಲ್ಲೆ ಕಡೂರಿನಲ್ಲಿ ಮೈತ್ರಿ ಸರಕಾರದ ಅಭ್ಯರ್ಥಿ ಜೆಡಿಎಸ್ ಪಕ್ಷದಿಂದ ಕಣದಲ್ಲಿರುವ ಪ್ರಮೋಧ್ ಮಧ್ವರಾಜ್ ಅವರ ಪರವಾಗಿ ಸಮಾವೇಶದಲ್ಲಿ ಮತಯಾಚನೆ ಮಾಡಿದರು, ಇದೇ ವೇಳೆ ಮಾತನಾಡುತ್ತಿದ್ದ ಪಕ್ಷದ ಕಾರ್ಯಕರ್ತನೊ ಅನಂದ್ ಅಣ್ಣನ ಪರ ಪ್ರಚಾರ ಮಾಡಲು ಯಾಕೆ ಬರಲಿಲ್ಲ ಅಂತ ಪ್ರಶ್ನೆಮಾಡಿದರು ಏಯ್ ಮುಚ್ಚಯ್ಯ ಬಾಯ್ನಾ ಆನಂದನಿಗೆ ಟಿಕೆಟ್ ಕೊಟ್ಟಿದ್ದು ನೀನಾ ಅಂತ ಪ್ರಶ್ನೆ ಮಾಡಿದ್ದರು, ಇದೇ ವೇಳೆ ಮತ್ತೆ ಆ ಕಾರ್ಯಕರ್ತ ಪ್ರಶ್ನೆ ಮಾಡಿದ ವೇಳೆಯಲ್ಲಿ ಸುಮ್ಮೆ ಇರು, ಇಲ್ಲ ಕಪಾಳಕ್ಕೆ ಹೊಡೆಯುವೆ ಅಂತ ಹೇಳಿದರು.