ಅವಕಾಶ ಸಿಕ್ಕರೆ ಸಿಎಂ ಆಗಲು ಸಿದ್ಧ : ಕತ್ತಿ

ಅವಕಾಶ ಸಿಕ್ಕರೆ ಸಿಎಂ ಆಗಲು ಸಿದ್ಧ : ಕತ್ತಿ

ಹುಬ್ಬಳ್ಳಿ, ಅ. 26 : ಅವಕಾಶ ಸಿಕ್ಕರೆ ಸಿಎಂ ಆಗಲು ಸಿದ್ಧ ಎಂದು ಮನದ ಇಂಗಿತ ಹೊರಹಾಕಿದ್ದ ಶಾಸಕ ಉಮೇಶ್ ಕತ್ತಿ, ಈಗ ಯಡಿಯೂರಪ್ಪ ಬಳಿಕ ನಾನೇ ರಾಜ್ಯದ ಮುಖ್ಯಮಂತ್ರಿಯಾಗಲಿದ್ದೇನೆ ಎಂದಿದ್ದಾರೆ.
ವಾಣಿಜ್ಯ ನಗರಿಯಲ್ಲಿ ಮಾತನಾಡಿದ ಅವರು, ಎಂಟು ಬಾರಿ ಶಾಸಕನಾಗಿ, ಮಂತ್ರಿಯಾಗಿ ನಾನು ಸೇವೆ ಸಲ್ಲಿಸಿದ್ದೇನೆ. ನಾನು ರಾಜ್ಯದ ಮುಖ್ಯಮಂತ್ರಿ ಆಗುತ್ತೇನೆ. ಆದರೆ, ಈಗಲ್ಲ. ಯಡಿಯೂರಪ್ಪ ನಂತರ ಪಕ್ಷದಲ್ಲಿ ನಾನೇ ಸಿಎಂ ಆಗುವುದು ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಉಪಮುಖ್ಯಮಂತ್ರಿ ಹುದ್ದೆ ಸಾಂವಿಧಾನಿಕ ಹುದ್ದೆಯಲ್ಲ. ನಾನು ಡಿಸಿಎಂ ಆಗುವುದಿಲ್ಲ. ನಾನು ಆದರೆ ರಾಜ್ಯದ ಮುಖ್ಯಮಂತ್ರಿಯೇ ಆಗುವುದು. ಮುಂದಿನ ದಿನಗಳಲ್ಲಿ ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿದೆ.

ಫ್ರೆಶ್ ನ್ಯೂಸ್

Latest Posts

Featured Videos